ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಚಿಕ್ಕಲ್ಬೆಟ್ಟು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ ಎರ್ಲಪಾಡಿ ಹೆಪ್ಪಳದಿಂದ ಚಿಕ್ಕಲ್ ಬೆಟ್ಟು ವ್ಯಾಘ್ರ ಚಾಮುಂಡಿ ದೈವಸ್ಥಾನದವರೆಗೆ ಎರಡು ಕಿಲೋಮೀಟರ್ ರಸ್ತೆಯ ಎರಡು ಬದಿಯ ಗಿಡಗಳನ್ನು ತೆಗೆದು ಸ್ವಚ್ಛತೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ತಾರಾನಾಥ ಶೆಟ್ಟಿ ಹಾಗೂ ಸೇವಾ ದೀಕ್ಷಿತೆ ಶ್ರೀಮತಿ ರೂಪ ಹಾಗೂ ಪದಾಧಿಕಾರಿಗಳಾದ ಮನ್ಮಥ ಮಡಿವಾಳ ಮತ್ತು ಸದಸ್ಯರು ಸಹಕರಿಸಿದರು.




