ಅಜೆಕಾರು: ವ್ಯಕ್ತಿಯೋರ್ವರು ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 21ರಂದು ವರದಿಯಾಗಿದೆ.

ಜಾರ್ಖಂಡ್ ಮೂಲದ ಸುಶೀಲ್ ಭಗತ್ (23) ಆತ್ಮಹತ್ಯೆ ಮಾಡಿಕೊಂಡವರು.
ಸುಶೀಲ್ ಭಗತ್ ಇವರು ಅಜೆಕಾರಿನ ದಿಲಿಪ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಮರ್ಣೆ ಕುರ್ಪಾಡಿಯ ಸೈಯದ್ ಇಸಾ ರವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ಕೆಲವು ದಿನಗಳಿಂದ ಯಾವುದೋ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
