ಕಾರ್ಕಳ: ಕಾರ್ಕಳ ತಾಲೂಕು ಕಸಬಾ ಗ್ರಾಮದ ಸಾಲ್ಮರ ಎಂಬಲ್ಲಿರುವ ಸೈಫ್ ಕಾಂಪ್ಲೆಕ್ಸ್ನಲ್ಲಿದ್ದ ಪೋಸ್ಟ್ ಆಫೀಸ್ನ ಬೋರ್ಡ್ ಶುಚಿಗೊಳಿಸುತ್ತಿದ್ದಾಗ ಅಯ ತಪ್ಪಿ ವ್ಯಕ್ತಿಯೋರ್ವರು ಮಹಡಿಯಿಂದ ಬಿದ್ದು ಗಾಯಗೊಂಡ ಘಟನೆ ಡಿ. 22ರಂದು ವರದಿಯಾಗಿದೆ.

ದಾರಾವಾಡ ನವಲಗುಂದ ನಿವಾಸಿ ಪ್ರವೀಣ ದೊಡಮನಿ (19) ಗಾಯಗೊಂಡವರು.
ಕಟ್ಟಡ ಮಾಲಕರಾದ ಕೆ.ಎಫ್ ಮೊಹಮ್ಮದ್ ಹಾಗೂ ರಾಜು ಮೇಸ್ತ್ರಿ ಇವರು ಮುಂಜಾಗ್ರತ ಕ್ರಮ ವಹಿಸದೆ ಬೋರ್ಡ್ನ್ನು ತೆಗೆದಿದ್ದು, ಈ ಸಂದರ್ಭ ಅವಘಡ ಸಂಭವಿಸಿದೆ.

ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯುಲ್ಲಿ ಪ್ರಕರಣ ದಾಖಲಾಗಿರುತ್ತದೆ.
