ಕಾರ್ಕಳ

ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರಪ್ರಶಸ್ತಿ

ಜೆಸಿಐ ಬೆಳ್ಮಣ್ ಘಟಕವು ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಅಧಿವೇಶನದಲ್ಲಿ ತರಬೇತಿ ವಿಭಾಗದ ರಾಷ್ಟ್ರಪ್ರಶಸ್ತಿಯನ್ನು ಪಡೆದಿದೆ. ಈ ವರ್ಷದ ಅವಧಿಯಲ್ಲಿ ಜೆಸಿಐ ಬೆಳ್ಮಣ್ ಘಟಕವು ನೂರು ತರಬೇತಿಗಳನ್ನು ಪೂರ್ತಿ ಮಾಡಿ ದಾಖಲೆ ಬರೆದಿತ್ತು. ಈ ಪ್ರಶಸ್ತಿಯನ್ನು ಜೆಸಿಐ ಬೆಳ್ಮಣ್ ಘಟಕದ 2025ರ ಅಧ್ಯಕ್ಷರಾದ ಇನ್ನ ಪ್ರದೀಪ್ ಶೆಟ್ಟಿಯವರು ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜುಂಝೂನವಾಲ ಅವರಿಂದ ಡಿ.28ರಂದು ಸ್ವೀಕಾರ ಮಾಡಿದರು.


ಜೆಸಿಐ ವಲಯಾಧ್ಯಕ್ಷ ಅಭಿಲಾಶ್ ಬಿ ಏ ಮತ್ತು ಇತರ ವಲಯಾಧಿಕಾರಿಗಳು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಇದ್ದರು. ಜೆಸಿಐ ಬೆಳ್ಮಣ್ ಘಟಕವು ಇದುವರೆಗೆ ಪಡೆದ ಐದನೇ ಪ್ರಶಸ್ತಿಯು ಇದಾಗಿದೆ.

Related posts

ಕಾರ್ಕಳ: ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ

Madhyama Bimba

ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Madhyama Bimba

ಕೆರ್ವಾಶೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ತಂದ ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More