ಜೆಸಿಐ ಬೆಳ್ಮಣ್ ಘಟಕವು ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಅಧಿವೇಶನದಲ್ಲಿ ತರಬೇತಿ ವಿಭಾಗದ ರಾಷ್ಟ್ರಪ್ರಶಸ್ತಿಯನ್ನು ಪಡೆದಿದೆ. ಈ ವರ್ಷದ ಅವಧಿಯಲ್ಲಿ ಜೆಸಿಐ ಬೆಳ್ಮಣ್ ಘಟಕವು ನೂರು ತರಬೇತಿಗಳನ್ನು ಪೂರ್ತಿ ಮಾಡಿ ದಾಖಲೆ ಬರೆದಿತ್ತು. ಈ ಪ್ರಶಸ್ತಿಯನ್ನು ಜೆಸಿಐ ಬೆಳ್ಮಣ್ ಘಟಕದ 2025ರ ಅಧ್ಯಕ್ಷರಾದ ಇನ್ನ ಪ್ರದೀಪ್ ಶೆಟ್ಟಿಯವರು ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜುಂಝೂನವಾಲ ಅವರಿಂದ ಡಿ.28ರಂದು ಸ್ವೀಕಾರ ಮಾಡಿದರು.

ಜೆಸಿಐ ವಲಯಾಧ್ಯಕ್ಷ ಅಭಿಲಾಶ್ ಬಿ ಏ ಮತ್ತು ಇತರ ವಲಯಾಧಿಕಾರಿಗಳು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಇದ್ದರು. ಜೆಸಿಐ ಬೆಳ್ಮಣ್ ಘಟಕವು ಇದುವರೆಗೆ ಪಡೆದ ಐದನೇ ಪ್ರಶಸ್ತಿಯು ಇದಾಗಿದೆ.

