ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಯವರಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕಾರ್ಕಳ ತಾಲೂಕು ಆಸ್ಪತ್ರೆಯ ಒಳ ರೋಗಿಗಳಿಗೆ, ಸ್ವಚ್ಛತಾ ಸಿಬ್ಬಂದಿಯವರಿಗೆ, ಸುರಕ್ಷಾ ಅನಾಥಾಶ್ರಮದ ನಿವಾಸಿಗಳಿಗೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈನ್ ಕಾರ್ಕಳ ಇಲ್ಲಿಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಹಣ್ಣುಹಂಪಲುಗಳನ್ನು ನೀಡಲಾಯಿತು.


ಸಂಸ್ಥೆಯ ಅಧ್ಯಕ್ಷ ರೋl ಸುರೇಂದ್ರ ನಾಯಕ್, ಮಾಜಿ ಅಧ್ಯಕ್ಷರಾದ ರೋl ಪ್ರಕಾಶ್ ಪೈ, ಸದಸ್ಯರುಗಳಾದ ರೋl ಶ್ರೀವರ್ಮ ಅಜ್ರಿ, ರೋl ಅಬ್ದುಲ್ ರೆಹಮಾನ್, ರೋl ಮನಿಷಾ ದೇವಾಡಿಗ ಹಾಗೂ ಶ್ರೀಮತಿ ಶರ್ಮಿಳಾ ರಮೇಶ್ ಶೆಟ್ಟಿ ರೆಂಜಾಳ ಈ ಸಂದರ್ಭದಲ್ಲಿದ್ದರು.


