ಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ(ರಿ) ಪುತ್ತಿಗೆ ಇದರ ವಾರ್ಷಿಕ ಕ್ರೀಡಾಕೂಟ ಗುಡ್ಡೆಯಂಗಡಿ ಸಂಘದ ಸಭಾಭವನದ ವಠಾರದಲ್ಲಿ ನರಸಿಂಹ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕರ್ನಾಟಕ ಬ್ಯಾಂಕ್ನ ಅಧಿಕಾರಿ ಪ್ರವೀಣ್ ನಾಯ್ಕ್ ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪುತ್ತಿಗೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಶಶಿಧರ ಪಿ ನಾಯಕ್ ಭಾಗವಹಿಸಿದ್ದರು.
ಗೌರವಧ್ಯಕ್ಷ ವಿಶ್ವನಾಥ ನಾಯ್ಕ, ಕ್ರೀಡಾ ಕಾರ್ಯದರ್ಶಿಯಾದ ಭುವನೇಂದ್ರ ಉಪಸ್ಥಿತರಿದ್ದರು.
