ಮೂಡುಬಿದಿರೆ

ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯುವಶ

ಮೂಡುಬಿದಿರೆ ಸಮೀಪದ ಬನ್ನಡ್ಕ ಬಳಿ ಸಂಭವಿಸಿದ ಕಾರು- ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ,ಕೋಟೆಬಾಗಿಲು ನಿವಾಸಿ ರೋಟರಿ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಸುವರ್ಣ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಶ್ರವಣ್ ಮತ್ತು ಆತನ ಸ್ನೇಹಿತ ಸೂರಜ್ ಕಾರ್ಕಳದತ್ತ ಬೈಕಲ್ಲಿ ಹೋಗುತ್ತಿದ್ದ ಸಂದರ್ಭ ಕಾರ್ಕಳ ಕಡೆಯಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದೆ.ಬನ್ನಡ್ಕ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶ್ರವಣ್ ಸುವರ್ಣ ಮೃತಪಟ್ಟಿದ್ದಾರೆ.

ಶ್ರವಣ್ ಕೋಟೆಬಾಗಿಲಿನ ಸದಾನಂದ ಸುವರ್ಣ- ಜಯಶ್ರೀ ದಂಪತಿ ಪುತ್ರ. ಸದಾನಂದ ಅವರಿಗೂ ಕೆಲ ವರ್ಷದ ಹಿಂದೆ ಅಪಘಾತವಾಗಿ ಮನೆಯಲ್ಲಿದ್ದಾರೆಂದು ತಿಳಿದುಬಂದಿದೆ.

 

Related posts

ಮೂಡುಬಿದಿರೆಯಲ್ಲಿ ರಾಷ್ಟ್ರೀಯ ರೈತ ದಿನ ಆಚರಣೆ

Madhyama Bimba

ಬೈಲಾರೆ ರಾಜಾಕಾಲುವೆಗೆ ಅಪಾಯ?

Madhyama Bimba

  ಮಹಾವೀರ ಕಾಲೇಜು ವಜ್ರಮಹೋತ್ಸವ ಮೆರವಣಿಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More