ಕಾರ್ಕಳ

ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಇದರ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜನ್ಮದಿನಾಚರಣೆಯ ಪ್ರಯುಕ್ತ ಕಾರ್ಕಳ ಆನೆಕೆರೆ ಬಳಿಯ ಸಿಗಡಿ ಕೆರೆಯಲ್ಲಿ ಕಾಳಿಕಾಂಬ ಪರಿಸರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಭಾವಿಯ ಸುತ್ತ ಬೆಳೆದ ಹುಲ್ಲು ಹಾಗೂ ಕಸವನ್ನು ಹೆಕ್ಕಿ ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭ ಕೆ. ಕೆ. ಎಂ. ಪಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್ ರಾವ್, ಕಾರ್ಯದರ್ಶಿ ಸಂತೋಷ್ ರಾವ್, ತಾಲೂಕು ಕಾರ್ಯದರ್ಶಿ ಹರೀಶ್ ರಾವ್, ಕೋಶಾಧಿಕಾರಿ ಸತೀಶ್ ರಾವ್ ಹಾಗೂ ಜ್ಯೋತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ್ ರಾವ್, ನಾಗೇಶ್ ರಾವ್, ನಿಖಿಲ್ ರಾವ್, ಸುನಿಲ್ ಕೋಟ್ಯಾನ್ ಸ್ವಚ್ಛ ಬ್ರಿಗೇಡ್ ಕಾರ್ಕಳ ಇದರ ಸದಸ್ಯ ಫೆಲ್ಲಿಕ್ಸ್ ವಾಜ್, ಸ್ಥಳೀಯರಾದ ಜಗದೀಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

 

Related posts

ಜ.30ರಂದು (ಇಂದು) ಮುನಿಯಾಲು ಕಾಡುಹೊಳೆಯಲ್ಲಿ ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಲೋಕಾರ್ಪಣೆ

Madhyama Bimba

ಕ್ರೈಸ್ಟ್‌ಕಿಂಗ್: ಅಚೀವರ್ಸ್ ದಿನಾಚರಣೆ

Madhyama Bimba

ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗಲು ಅಕ್ಕ ಪಡೆ ಸನ್ನದ್ಧ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More