ಮೂಡುಬಿದಿರೆ

ಬಾವಿಗೆ ಬಿದ್ದ ಮಹಿಳೆ – ಆತ್ಮಹತ್ಯೆಗೆ ಶರಣಾದ ಚಾಲಕ

ಬಾವಿಗೆ ಬಿದ್ದಿದ್ದೆನ್ನಲಾದ ಮಹಿಳೆ ಜೀವಂತವಾಗಿ ಬಾವಿಯಿಂದ ಮೇಲೆ ಬರುತ್ತಿದ್ದಂತೆ ಪಕ್ಕದ ಮನೆಯ ರಿಕ್ಷಾ ಚಾಲಕ ರೆಂಜಾಳ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣ ನೆಲ್ಲಿಕಾರು ಎಂಬಲ್ಲಿ ನಡೆದಿದೆ.

ನೆಲ್ಲಿಕಾರು ಪರಿಸರದ 70 ವರ್ಷದ ಮಹಿಳೆ ಪದ್ಮಾವತಿ ಎಂಬವರು ನೆರೆಕರೆಯ ರಿಕ್ಷಾ ಚಾಲಕ ಸತೀಶ್ ಶೆಟ್ಟಿ ( 45) ಎಂಬವರ ರಿಕ್ಷಾದಲ್ಲಿ ಬಾಡಿಗೆ ಹೋಗುತ್ತಿದ್ದರು. ಏಪ್ರಿಲ್ 30ರಂದು ಬಾವಿಗೆ ಬಿದ್ದಿದ್ದ ಮಹಿಳೆ ಇರುವ ಬಾವಿಯ ಸಮೀಪ ಯಾರೋ ತೆರಳಿದಾಗ ಮಹಿಳೆ ಬಾವಿ ಯಲ್ಲಿ ಕಂಡುಬಂತೆಂದು ಸ್ಥಳೀಯರು ತಿಳಿಸಿದ್ದಾರೆ. ಮಹಿಳೆ ಜೀವಂತವಾಗಿ ಪತ್ತೆಯಾದ ನಂತರ ರಿಕ್ಷಾ ಚಾಲಕ ರೆಂಜಾಳ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಶ್ರೀಕ್ಷಾ ಪಿಯುಸಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ

Madhyama Bimba

 ಚೇತನ ಯುವಕ ಮಂಡಲದ ವಾರ್ಷಿಕೋತ್ಸವ- ಮಾರ್ನಾಡಿನ ಸೇವಾ ಮಾಣಿಕ್ಯ ರಾಘು ಸಿ ಪೂಜಾರಿಯವರಿಗೆ ಹುಟ್ಟೂರ ಗೌರವ

Madhyama Bimba

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆಳ್ವಾಸ್ ಐತಿಹಾಸಿಕ ಸಾಧನೆ -ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಾಜ್ಯಕ್ಕೆ ಮೊದಲ ರ್‍ಯಾಂಕ್- ವಿಜ್ಞಾನ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿ ದ್ವಿತೀಯ ರ್‍ಯಾಂಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More