ಕಾರ್ಕಳ: ಕುಟುಂಬದ ಜಾಗದ ತಕರಾರು ಬಗ್ಗೆ ಅಣ್ಣ ತಮ್ಮಂದಿರ ನಡುವೆ ಹಲವಾರು ಸಮಯಗಳಿಂದ ಜಗಳವಾಗುತ್ತಿದ್ದು, ಇದೀಗ ಅಣ್ಣನ ಕೊಲೆಯಿಂದ ಪ್ರಕರಣವು ಮತ್ತಷ್ಟು ಬಿಗಡಾಯಿಸಿದೆ.
ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿಯಲ್ಲಿ ವಾಸವಾಗಿರುವ ರಿಚರ್ಡ್ ಡಿಸೋಜ ಹಾಗೂ ಅವರ ತಮ್ಮ ಹೆರಾಲ್ಡ್ ಡಿಸೋಜರ ನಡುವೆ ಮನೆ ಹಾಗೂ ಜಾಗದ ವಿಷಯವಾಗಿ ಜಗಳ ನಡೆಯುತ್ತಲೇ ಇತ್ತು.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮೇ. 02ರಂದು ವಿಪರೀತ ಜಗಳವಾಗಿ ಹೆರಾಲ್ಡ್ ಡಿ’ಸೋಜಾ ಮರದ ರೀಪು ಅಥವಾ ಬೇರೆ ಯಾವುದೋ ಆಯುಧದಿಂದ ರಿಚರ್ಡ್ ಡಿಸೋಜರವರಿಗೆ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
