ಸಾಮಾಜಿಕ ರಾಜಕೀಯ ಮುಂದಾಳು ಗಂಗಾಧರ ಶೆಟ್ಟಿ ಅವರು ಇಂದು ನಿಧನರಾಗಿದ್ದಾರೆ.
ನಿಡ್ಡೋಡಿಯ ನಿವಾಸಿಯಾಗಿರುವ ಅವರು ಕಲ್ಲಮುಂಡ್ಕೂರಿನಲ್ಲಿ ಗುರು ಎಂಟರ್ಪ್ರೈಸ್ ಸಂಸ್ಥೆಯನ್ನು ಹೊಂದಿದ್ದರು.
ರಂಗಕಲಾವಿದರಾಗಿ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಪ್ರಸ್ತುತ ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿದ್ದರು. ಕಲ್ಲಮುಂಡ್ಕೂರು ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
