
ಮೂಡುಬಿದಿರೆ ಬಳಿಯ ಬನ್ನಡ್ಕ ಎಂಬಲ್ಲಿ ನಿರಂತರವಾಗಿ ನಡೆಯುತ್ತಿರುವ ಅಫಘಾತ ಕುರಿತಂತೆ ಚರ್ಚೆ ನಡೆಸಲು ಪಡುಮಾರ್ನಾಡು ಗ್ರಾಮಸ್ಥರು ಸಭೆ ನಡೆಸಿದರು. ಪ್ರಮುಖರಾದ ಸೂರಜ್ ಮರ್ನಾಡ್, ಸಂತೋಷ್, ಅಕ್ಷಯ್, ಸುಧಾಕರ್ ಆಚಾರ್ಯ, ನಿತಿನ್ ಕೋಟ್ಯಾನ್, ಸಂತೋಷ್ ಜೈನ್ ಮತ್ತಿತರರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸಂಪರ್ಕಿಸಿ ಸಮಸ್ಯೆಯ ಗಂಭೀರತೆ ತಿಳಿಸಿದಾಗ ಸ್ಥಳ ಪರಿಶೀಲನೆ ಮಾಡುವ ಬಗ್ಗೆ ಅವರು ಮಾಹಿತಿ ನೀಡಿದರು.
