
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ಆರು ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇಮಕಗೊಳಿಸಿ ಆದೇಶಿಸಿದ್ದಾರೆ. ಪಡುಮಾರ್ನಾಡು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಮೇಶ್ ಎಸ್.ಶೆಟ್ಟಿ ಸಹಿತ ಆರು ಮಂದಿ ನೇಮಕಗೊಂಡಿದ್ದಾರೆ.
ಮೂಡುಬಿದಿರೆ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ, ಪಡುಮಾರ್ನಾಡು ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ, ಪಡುಮಾರ್ನಾಡು ಯುವಕ ಮಂಡಲದ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ, ಶಿರ್ತಾಡಿಯ ಸಕ್ರೀಯ ಸದಸ್ಯ ಸೂರಜ್ ಕುಮಾರ್ ಜೈನ್, ಪುರಸಭಾ ಮಾಜಿ ಸದಸ್ಯ ಸುರೇಶ್ ಪ್ರಭು, ಸುರೇಶ್ ದೇವಾಡಿಗ, ಕಿರಣ್ ಕುಮಾರ್ ಹಾಗೂ ಸುಪ್ರಿಯಾ ಡಿ.ಶೆಟ್ಟಿ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ.
