ಅಜೆಕಾರು: ಮರ್ಣೆ ಗ್ರಾಮದ ದೆಪ್ಪುತ್ತೆ ಬಳಿ ಬೈಕ್ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮೇ. 25ರಂದು ವರದಿಯಾಗಿದೆ.
ಸುರೇಂದ್ರ ಗಾಯಗೊಂಡವರು.
ಮರ್ಣೇ ಗ್ರಾಮದ ದೆಪ್ಪುತ್ತೆ ಚಾಮುಂಡೇಶ್ವರೀ ದೇವಸ್ಥಾನದ ಬಳಿ ಪ್ರಶಾಂತರವರ ಕಾರು ಅಜೆಕಾರು ಕಡೆಯಿಂದ ದೆಪ್ಪುತ್ತೆ ಕಡೆಗೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿಯಾಗಿದೆ.
ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸುರೇಂದ್ರ ಗಾಯಗೊಂಡು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
