ಪಡುಮಾರ್ನಾಡು ಅಚ್ಚರಕಟ್ಟೆ ಶ್ರೀ ಕುಂಭಕಂಠೀಣಿ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿ ಇದರ ಭಜನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.
ವಿಶ್ರಾಂತ ಪೋಸ್ಟ್ ಮಾಸ್ಟರ್ ಜಗತ್ಪಾಲ್ ಎಸ್. ಹೆಗ್ಡೆ, ಬ್ಯಾಗ್ ದಾನಿ ಸುಂದರ ಪೂಜಾರಿ,
ಭಜನಾ ಪರಿಷತ್ ಬೆಳುವಾಯಿ ವಲಯ ಅಧ್ಯಕ್ಷ ಸದಾನಂದ ಕುಲಾಲ್, ಅಚ್ಚರಕಟ್ಟೆ ಶಾಲೆ ಶಿಕ್ಷಕಿ ಶಕುಂತಲ ಶೆಟ್ಟಿ, ಸ್ಥಳೀಯರಾದ ಪ್ರಮೋದ್ ಅಚ್ಚರಕಟ್ಟೆ, ಭಜನಾ ಶಿಕ್ಷಕರಾದ ಶಿವರಾಂ ಕಡಂದಲೆ, ಪ್ರವೀಣ ಪೂಜಾರಿ,
ಕುಂಭಕಂಠಿಣಿ ಮಹಿಳಾ ಭಜನಾಮಂಡಳಿ ಅಧ್ಯಕ್ಷೆ ಸೌಮ್ಯ, ಪ್ರಮುಖರಾದ ರವಿ ಬಡಕೋಡಿ, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.
ರವಿ ಅಚ್ಚರಕಟ್ಟೆ ನಿರೂಪಣೆಗೈದರು. ಶಿಕ್ಷಕಿ ಮನು ಸ್ವಾಗತಿಸಿದರು. ಸ್ಮಿತಾ ವಂದಿಸಿದರು.
