Blog

ಕಾರ್ಕಳ ಜ್ಞಾನಸುಧಾ : ಶ್ರೀ ಮಹಾಗಣಪತಿ ಪ್ರತಿಷ್ಠಾ ಮಹೋತ್ಸವ 

ಕಾರ್ಕಳ: ಶಿಕ್ಷಣ ಕ್ಷೇತ್ರದಲ್ಲಿ ಡಾ.ಸುಧಾಕರ್ ಶೆಟ್ಟಿಯವರು ನಿಜವಾದ ಶರಣ. ಅವರಿಗಿರುವ  ಶೈಕ್ಷಣಿಕ ಕಾಳಜಿ, ಬದ್ಧತೆಯನ್ನು ಸರ್ವರೂ ಮೆಚ್ಚಲೇ ಬೇಕು. ಮಾತ-ಪಿತರನ್ನು ಗೌರವಿಸಿದವರು ಜೀವನದಲ್ಲಿ ಸದಾ ಸಫಲತೆಯನ್ನು ಪಡೆಯುತ್ತಾರೆ ಎಂದು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕರಾದ ಅಜಿತ್ ಸಿ ಮಣ್ಣಿಕೇರಿ ಹೇಳಿದರು.


ಅವರು ಕುಕ್ಕುಂದೂರಿನ ಗಣಿತನಗರದ ಶ್ರೀ ಮಹಾಗಣಪತಿ ದೇವಳದ 13ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಸಾಯಿರಾಧಾ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರು ಆಗಿರುವ ಮನೋಹರ್‌ಎಸ್ ಶೆಟ್ಟಿಯವರು ಮಾತನಾಡಿ, ನಾವೆಷ್ಟೇ ಶಿಕ್ಷಣ ಪಡೆದು ಪದವೀಧರರಾದರೂ, ವ್ಯಕ್ತಿತ್ವದ ಗುಣಮಟ್ಟ ಎನ್ನುವುದು ನಮ್ಮ ಸಂಸ್ಕಾರದಿಂದ ಕೂಡಿರಲು ಸಾಧ್ಯ. ಅಂತಹ ಸಂಸ್ಕಾರಯುತವಾದ ಶಿಕ್ಷಣ ಜ್ಞಾನಸುಧಾದಿಂದ ಲಭಿಸುತ್ತಿದೆ ಎಂಬುದಕ್ಕೆ ಇಂದಿನ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳ ನಡವಳಿಕೆ ನನಗೆ ಇಷ್ಟವಾಯಿತು ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವ್ ಎಜ್ಯುಕೇಶನಲ್ & ಕಲ್ಚರಲ್ ಟ್ರಸ್ಟ್ ಕುಂದಾಪುರ ಇದರ ಕಾರ್ಯದರ್ಶಿಯಾಗಿರುವ ಕೆ.ರಾಧಾಕೃಷ್ಣ ಶೆಣೈ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೊತೆಗೆಅವರ ಏಳಿಗೆಗೆ ಬೆನ್ನೆಲುಬಾದ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿವರ್ಗವನ್ನು ಪ್ರೋತ್ಸಾಹಿಸುತ್ತಿರುವ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಕಾರ್ಯ ಶ್ಲಾಘನೀಯ ಎಂದು ನುಡಿದರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ಇದೇ ಸಂದರ್ಭದಲ್ಲಿ ಸೇವಾ ನಿವೃತ್ತರಾದ ಗೋಪಾಲ್ ಸುವರ್ಣರವನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ 10 ವರ್ಷಗಳ ಸೇವೆ ಸಲ್ಲಿಸಿದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಸಾಧಕರನ್ನು ಜೊತೆಗೆ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕ ವರ್ಗವನ್ನು ಗೌರವಿಸಲಾಯಿತು. ಟ್ರಸ್ಟಿನಿಂದ ಈ ಬಾರಿ 60 ಲಕ್ಷದ 9 ಸಾವಿರದ ಎಂಟುನೂರ ಎಂಬತ್ತೇಳು ರೂಪಾಯಿ ಮೊತ್ತದ ಪ್ರೋತ್ಸಾಹಧನ ವಿತರಿಸಲಾಯಿತು. ೪೧ನೇ ಸಂಚಿಕೆ-ಜ್ಞಾನಸುಧಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಟ್ರಸ್ಟಿಗಳಾಧ ಸಿ.ಎ. ನಿತ್ಯಾನಂದ ಪ್ರಭು, ಅನಿಲ್ ಕುಮಾರ್‌ಜೈನ್ ಹಾಗೂ ಶ್ರೀಮತಿ ವಿದ್ಯಾವತಿ ಎಸ್ ಶೆಟ್ಟಿ, ಉಜ್ವಲ ಡೆವಲಪರ್‍ಸ್‌ನ ಪುರುಷೋತ್ತಮ ಶೆಟ್ಟಿ, ಗಣಿತನಗರದ ಶ್ರೀ ಮಹಾಗಣಪತಿ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷರಾದ ಕಮಲಾಕ್ಷ ನಾಯಕ್, ಕಾರ್ಕಳ ಜ್ಞಾನಸುಧಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರ್, ದೇವಸ್ಥಾನದ ಕಾರ್ಯದರ್ಶಿ ಹಾಗೂ ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂಜ್ಞಾನಸುಧಾ ಹಿತೈಷಿಗಳು, ಬಂಧುಗಳು, ಪೋಷಕ ಬಳಗ, ವಿದ್ಯಾರ್ಥಿಮಿತ್ರರು ಉಪಸ್ಥಿತರಿದ್ದರು.

ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸಂಗೀತಾ ಕುಲಾಲ್ ನಿರೂಪಿಸಿ, ವಂದಿಸಿದರು. ಉಪನ್ಯಾಸಕರಾದ ಶರತ್ ಆರ್ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ಹಾಗೂ ಸನ್ಮಾನಿತರ ಪತ್ರವನ್ನು ಸಂತೋಷ್ ನೆಲ್ಲಿಕಾರು ವಾಚಿಸಿದರು.

Related posts

ನಿಟ್ಟೆ ನಿವಾಸಿ ಸುಕೇಶ್ ಶೆಟ್ಟಿ ನಿಧನ

Madhyama Bimba

ಕಾಬೆಟ್ಟು ನಾಗೋಳಿ- ಕಲ್ಕುಡ ಕಲ್ಲುರ್ಟಿ ಕಾಳಮ್ಮ  ದೈವಗಳ ವಾರ್ಷಿಕ ನೇಮೋತ್ಸವ

Madhyama Bimba

ಮಾಧ್ಯಮ ಪತ್ರಕರ್ತರ ಸಂಘ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More