ಕಾರ್ಕಳ: ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ ಸಂದೇಶದ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಜೂ. 04ರಂದು ವರದಿಯಾಗಿದೆ.

ವಾಸುದೇವರವರಿಗೆ ಆರ್ಟಿಓ ಪಿಡಿಎಫ್ ವಾಟ್ಸಾಪ್ ಸಂದೇಶ ಬಂದಿದ್ದು, ಓಪನ್ ಮಾಡಲು ನೋಡಿದಾಗ ಓಪನ್ ಆಗದೇ ಇದ್ದು, ನಂತರ ಹಲವಾರು ಬಾರಿ ಓಟಿಪಿ ಬಂದಿರುತ್ತದೆ. ವಾಸುದೇವರವರ ಕಾರ್ಕಳ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂಪಾಯಿ 5,63,117/- ಹಣ ಕಡಿತಗೊಂಡಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ವಾಸುದೇವರವರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
