ಕಾರ್ಕಳ: ಹಿರ್ಗಾನ ಗ್ರಾಮದ ಕುಕ್ಕುದಕಟ್ಟೆ ಬಳಿ ಕಾರುಗಳ ನಡುವೆ ಅಪಘಾತವಾದ ಘಟನೆ ಜೂ, ೦೫ರಂದು ನಡೆದಿದೆ.

ಕುಕ್ಕುಂದೂರಿನ ನಾಭಿರಾಜ್ ಜೈನ್ (56) ಮತ್ತು ಪತ್ನಿ ಸುಕನ್ಯ ಜೈನ್ರೊಂದಿಗೆ ಓಮ್ನಿ ಕಾರಿನಲ್ಲಿ ಜೋಡುರಸ್ತೆಯಿಂದ ಅಜೆಕಾರ್ ಕಡೆಗೆ ಹೋಗುತ್ತಿರುವಾಗ ಹರೀಶ್ ತನ್ನ ಕಾರನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಓಮ್ನಿ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
