ಕಾರ್ಕಳ: ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಸದಸ್ಯರ ಅನಧಿಕೃತ ಆಯ್ಕೆಯಾದ ಕುರಿತು ಜೂ. 22 ರಂದು ತಾಲೂಕು ದಲಿತ ಸಂಘಟನೆಗಳ ನಾಯಕರುಗಳಿಂದ ಶಾಸಕರಿಗೆ ಮನವಿ ನೀಡಲಾಯಿತು.
ಮನವಿಯಲ್ಲಿ ನಿರ್ವಹಣಾ ಸಮಿತಿಯ ಸದಸ್ಯರನ್ನು ಅನರ್ಹಗೊಳಿಸಿ ಹೊಸದಾಗಿ ಸಮಿತಿ ರಚಿಸುವಂತೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ನಾಯಕರುಗಳಾದ ಗೋವರ್ಧನ್ ರಾಣೆ, ಸುಧಾಕರ್ ದಾನಶಾಲೆ, ಹರೀಶ್ ಬಜಗೋಳಿ, ಸುಹಾಸ್ ಮುಡಾರು, ರಮೇಶ್ ಜರಿಗುಡ್ಡೆ, ಸುನೀತಾ ಅಂಡಾರು ಉಪಸ್ಥಿತರಿದ್ದರು.
