ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ, ಗಣಿತ ನಗರದಲ್ಲಿ ಜೂ. ೨೦ ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡಬಿದಿರೆಯ ಯೋಗ ತರಬೇತುದಾರರಾದ ತನುಶ್ರೀ ಡಿ. ಬಂಗೇರ ಕಾರ್ಯಕ್ರಮನ್ನು ಉದ್ಘಾಟಿಸಿ, ಯೋಗ ಮತ್ತು ಪ್ರಾಣಾಯಮವು ದಿನನಿತ್ಯ ಎಷ್ಟು ಅವಶ್ಯಕ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಪುಷ್ಪಲತಾ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲೆಯಾದ ವಾಣಿ.ಕೆ ಹಾಗೂ ಶಿಕ್ಷಕ ವೃಂದರವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿನಿ ಅವನಿ ಪೈ ಕಾರ್ಯಕ್ರಮ ನಿರೂಪಿಸಿ, ದಿಶಾ ಡಿ ಸ್ವಾಗತಿಸಿ, ವಿದ್ಯಾರ್ಥಿ ತೀಕ್ಷಣ್ ಪ್ರಾರ್ಥಿಸಿ, ನಿಷ್ಕಾ ಧನ್ಯವಾದ ಸಮರ್ಪಿಸಿದರು.
