ಹೆಬ್ರಿ: ಶಿವಪುರ ಗ್ರಾಮದ ಖಜಾನೆ ನಮನ ಹೋಟೆಲ್ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾದ ಘಟನೆ ಜೂ. 26 ರಂದು ವರದಿಯಾಗಿದೆ.
ಕರುಣಾಕರ ಶೆಟ್ಟಿ ಎಂಬುವವರು ಶಿವಪುರದ ಬಾರ್ನಿಂದ ಅಕ್ರಮವಾಗಿ ಮದ್ಯವನ್ನು ತಂದು ಮಾರಾಟ ಮಾಡುವ ಉದ್ದೇಶದಿಂದ ಶೇಖರಿಸಿ ಇಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಹೆಬ್ರಿ ಠಾಣೆಯ ಪಿಎಸ್ಐ ಎ.ಕೆ ಚಂದ್ರ ದಾಳಿ ನಡೆಸಿ ಒಟ್ಟು ರೂ. 15,840 ಮೌಲ್ಯದ ಮದ್ಯ ಪ್ಯಾಕೆಟ್ಗಳನ್ನು ಸ್ವಾಧಿನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
