ಕಾರ್ಕಳ: ಆನೆಕೆರೆ ರಾಜ್ಯ ಹೆದ್ದಾರಿಯಲ್ಲಿ ಅಟೋ ರಿಕ್ಷಾಕ್ಕೆ ಕಾರು ಡಿಕ್ಕಿಯಾದ ಘಟನೆ ಜು. ೦೪ರಂದು ವರದಿಯಾಗಿದೆ.
ಅಟೋ ರಿಕ್ಷಾ ಚಾಲಕ ನಾಗರಾಜ ಶೆಟ್ಟಿ ಗಾಯಗೊಂಡವರು.
ಕಾಬೆಟ್ಟುವಿನಿಂದ ಆನೆಕೆರೆ ಕಡೆಗೆ ಹೋಗುತ್ತಿದ್ದ ಅಟೋ ರಿಕ್ಷಾಕ್ಕೆ ಹಿಂಬದಿನಿಂದ ಕಾರು ಡಿಕ್ಕಿಯಾಗಿದೆ.
ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಮೇತ ರಿಕ್ಷಾವು ಗದ್ದೆಗೆ ಮಗುಚಿ ಬಿದ್ದು ನಾಗರಾಜ ಶೆಟ್ಟಿಯವರು ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
