ಕಾರ್ಕಳ: ಆನೆಕೆರೆ ಬಸದಿ ರಸ್ತೆ ಬಳಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳವಾದ ಘಟನೆ ಡಿ. 1ರಂದು ವರದಿಯಾಗಿದೆ.



ಜಾರ್ಕಳ ಮುಂಡ್ಲಿಯ ಗುಣಕರ ಶೆಟ್ಟಿ (56)ಯವರು ಡಿ. 1ರಂದು ಬೆಳಿಗ್ಗೆ ತನ್ನ ಸ್ಕೂಟಿ ಹಾಗೂ ಸ್ಕೂಟಿಯಲ್ಲಿ ರೆಡ್ಮಿ ಕಂಪೆನಿಯ ಸಿಮ್ ಸಹಿತ ಮೊಬೈಲ್ನೊಂದಿಗೆ ಆನೆಕೆರೆ ಬಸದಿ ಬಳಿ ರಸ್ತೆ ಬದಿ ನಿಲ್ಲಿಸಿ ಕೀಯನ್ನು ಸ್ಕೂಟರ್ನಲ್ಲಿ ಬಿಟ್ಟು ಹೋಗಿದ್ದರು. ಮಧ್ಯಾಹ್ನ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಕೂಟಿಯನ್ನು ಯಾರೋ ಕಳ್ಳರು ಕಳವು ಮಾಡಿದ್ದರು.

ಕಳವಾದ ಸ್ಕೂಟಿಯ ಅಂದಾಜು ಮೌಲ್ಯ ರೂ. 48,000ಹಾಗೂ ಮೊಬೈಲ್ನ ಅಂದಾಜು ಮೌಲ್ಯ ರೂ. 3000 ಆಗಿರುತ್ತದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
