ಕಾರ್ಕಳ

ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಜೇಸಿ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಆಚರಣೆ

ಜೇ ಸಿ ಐ ಕಾರ್ಕಳ ಮತ್ತು ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಕೇರ್ತಾಡಿ ಗುತ್ತು ವೃಷಭ ರಾಜ್ ಕಡಂಬರ ಮನೆಯಲ್ಲಿ ನಡೆಯಿತು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಂತಿ ರಾಜ್ ಜೈನ್ ನಲ್ಲೂರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಜೇಸಿಐ ಕಾರ್ಕಳದ ಪೂರ್ವ ಅಧ್ಯಕ್ಷರಾದ ವೃಷಭ ರಾಜ್ ಕಡಂಬ ಮಾತನಾಡಿ ಇಂದಿನ ಕಾರ್ಯಕ್ರಮ ಯಶಸ್ವಿಯಾಗಲಿ, ಎಲ್ಲಾ ಮಕ್ಕಳು ನಿಮ್ಮ ಶಾಲೆಗೆ ಕೀರ್ತಿ ತನ್ನಿ, ನಿಮ್ಮ ಶಾಲೆ ಬೆಳೆಯಲು ಬೇಕಾದ ಅವಕಾಶಗಳನ್ನು ಮಾಡಿಕೊಡಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಜೇಸಿ ಅವಿನಾಶ್ ಶೆಟ್ಟಿ ಯವರು ಕೆಸರಲ್ಲಾಡುವ ಎಲ್ಲಾ ಆಟಗಳಲ್ಲಿ ಭಾಗವಹಿಸಿ, ಸಂತೋಷವನ್ನು ಅನುಭವಿಸಿ, ಶಾಲೆಗೆ ಹೆಸರು ತನ್ನಿ, ಸಾಧನೆ ಮಾಡಿ ಎಂದರು.

ಅತ್ಯುತ್ತಮ ಕೃಷಿಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ವಾದಿರಾಜ್ ಶೆಟ್ಟಿಯವರು ಮಾತನಾಡಿ ಕಾರ್ಕಳದ ಶಿಸ್ತಿನ ಈ ಸಂಸ್ಥೆ ಇಂತಹ ಕಾರ್ಯಕ್ರಮವನ್ನು ನೆರವೇರಿಸುವುದು ತುಂಬಾ ಸಂತೋಷ. ಇಂತಹ ಗದ್ದೆಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುತ್ತಿರುವುದು ಇದೊಂದು ಅತ್ಯುತ್ತಮ ಕಾರ್ಯಕ್ರಮ. ನಾನು ಜೇಸಿಯ ಅಧ್ಯಕ್ಷನಾಗಿದ್ದಕ್ಕೆ ಇವತ್ತು ಸಾರ್ಥಕವಾಗಿದೆ. ನನ್ನನ್ನು ಸನ್ಮಾನಿಸಿದ್ದೀರಿ, ಈ ಸಂಸ್ಥೆ ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಬದುಕುವ ಅಡಿಪಾಯ ಹಾಕುತ್ತಿದೆ. ಇಲ್ಲಿಯ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದರು .

ಜೆಎಫ್‌ಎಸ್ ಸಂತೋಷ್ ಶೆಟ್ಟಿ ಯವರು, ಮಕ್ಕಳಿಗೆ ಕೃಷಿಯ ಮಾಹಿತಿ, ಬೆಳೆಯುವ ಬಗ್ಗೆ, ಇಂತಹ ಕಾರ್ಯಕ್ರಮಗಳ ಮೂಲಕ ತಿಳಿಯುತ್ತದೆ. ರೈತರಿಗೆ ಗೌರವ ಕೊಡಬೇಕು. ಮಣ್ಣಿನೊಂದಿಗೆ ಸಂಬಂಧ ಬೆಳೆದಾಗ ಕೃಷಿಯ ಮಹತ್ವ ತಿಳಿಯುತ್ತದೆ. ಇಂದಿನ ದಿನವನ್ನು ಸರಿಯಾಗಿ ಅನುಭವಿಸಿ. ಪ್ರಕೃತಿಗೆ ಸರಿಯಾದ ವ್ಯಕ್ತಿಗಳಾಗಿ ಎಂದರು.

ಜೇಸಿಐ ಇಂಡಿಯಾ ರಾಷ್ಟ್ರಾಧ್ಯಕ್ಷರಾದ ಆರ್‌ಪಿಪಿ ಭರತ್ ಆಚಾರ್ಯ ಮಾತನಾಡಿ ದೇಶವಿದೇಶಗಳಲ್ಲಿ ಎಷ್ಟೇ ಓಡಾಡಿದರು ಇದು ನಮ್ಮ ಜಾಗ, ನಮ್ಮ ಊರು, ತುಂಬಾ ಖುಷಿ ಆಗುತ್ತದೆ. ಮತ್ತೆ ಈ ಕಾರ್ಯಕ್ರಮಕ್ಕೆ ಕರೆದರೆ ಬರುತ್ತೇನೆ. ನಾನು ಮಕ್ಕಳೊಂದಿಗೆ ಗದ್ದೆಯಲ್ಲಿ ಆಡಬೇಕು ಎಂಬ ಆಸೆ ಇದೆ. ಇದು ಹೀಗೆ ನಡೆಯಲಿ. ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದ ಅವಾರ್ಡ್ ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ, ಜೇಸಿಐನ ಸದಸ್ಯರು. ಶಾಲಾ ಮುಖ್ಯೋಪಾಧ್ಯಾಯರಾದ ಶಂಕರನ್ ಪಿ ನಂಬೂಧರಿ ಹಾಗೂ ಶಾಲಾ ಆಡಳಿತ ಅಧಿಕಾರಿ ಪ್ರಣೀತ್ ಉಪಸ್ಥಿತರಿದ್ದರು.

Related posts

ಅಶಕ್ತ ಕುಟುಂಬಕ್ಕೆ ನೂತನ ಗ್ರಹ ನಿರ್ಮಾಣದ ಆಸರೆ: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಾದರಿ ಕಾರ್ಯ

Madhyama Bimba

ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ: ಅರ್ಜಿ ಆಹ್ವಾನ

Madhyama Bimba

ಎನ್.ಡಿ.ಎ ಪ್ರವೇಶ ಪರೀಕ್ಷೆ:  ಜ್ಞಾನಸುಧಾದ ಹನ್ನೊಂದು ವಿದ್ಯಾರ್ಥಿಗಳು ತೇರ್ಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More