ಮೂಡುಬಿದಿರೆ

ಪೂರ್ಣಿಮಾ ಪೇಜಾವರರಿಗೆ ವನಜಾಕ್ಷಿಯಮ್ಮ ಟ್ರಸ್ಟ್ ಸನ್ಮಾನ

ಮೂಡುಬಿದಿರೆ: ಹಿರಿಯ ತಾಳಮದ್ದಳೆ ಅರ್ಥಧಾರಿ ಪೂರ್ಣಿಮಾ ಪೇಜಾವರ ಅವರಿಗೆ ವನಜಾಕ್ಷಿಯಮ್ಮ ಚಾರಿಟೇಬಲ್ ಟ್ರಸ್ಟಿನ 2026ನೇ ಸಾಲಿನ ಸನ್ಮಾನ ನೀಡಿ ಗೌರವಿಸಲಾಯಿತು.

ಮೂಡುಬಿದಿರೆ ಪ್ರೀತಂ ಗಾರ್ಡನ್ ಸಭಾಭವನದಲ್ಲಿ ನಡೆದ ಯಕ್ಷದೇವ ಮಿತ್ರ ಕಲಾ ಮಂಡಳಿಯ 29ನೇ ಯಕ್ಷ ಸಂಭ್ರಮದ ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು.

ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನಗೈದರು. ವನಜಾಕ್ಷಿ ಅಮ್ಮ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ದೀಪ್ತಿ ಬಾಲಕೃಷ್ಣ ಸನ್ಮಾನಪತ್ರ ವಾಚಿಸಿದರು. ಟ್ರಸ್ಟಿಗಳಾದ ಬಲರಾಮ ಜೆ.ಎಸ್., ಬಾಲಕೃಷ್ಣ ಭಟ್, ಅಲಕಾ ಬಲರಾಮ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ., ಕರ್ನಾಟಕ ಬ್ಯಾಂಕ್ ನ ಮಹಾ ಪ್ರಭಂದಕರಾದ ನಾಗರಾಜ ಉಪಾಧ್ಯಾಯ,ಯಕ್ಷದೇವ ಮಿತ್ರ ಮಂಡಳಿ ಸ್ಥಾಪಕ ಎಂ. ದೇವಾನಂದ ಭಟ್, ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಬೊಕ್ಕಸ ಚಂದ್ರಶೇಖರ ರಾವ್, ರವಿಪ್ರಸಾದ್ ಕೆ. ಶೆಟ್ಟಿ, ನೆಲ್ಲಿಮಾರ್ ಸದಾಶಿವ ರಾವ್ ಮತ್ತಿತರರು ಉಪಸ್ಥಿತರಿದ್ದರು.

Related posts

“ಸ್ವಚ್ಛ ಸರ್ವೇಕ್ಷಣೆ” ಸ್ವಚ್ಛತೆಯ ಸಮೀಕ್ಷೆ

Madhyama Bimba

ಮುಲ್ಕಿ- ಮೂಡಬಿದ್ರೆ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಸಂತ ಬರ್ನಾಡ್ .

Madhyama Bimba

 ಕಾರ್ಕಳ ಮತ್ತು ಮೂಡುಬಿದಿರೆಯಲ್ಲಿ ಇಕೋ ಮೋಟರ್ಸ್ ನಿಂದ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟಕ್ಕೆ ವಿಶೇಷ ಸೇವೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More