Blog

ಸುಬ್ರಮಣ್ಯ ಸ್ವಾಮೀಜಿಯನ್ನು ಭೇಟಿ ಮಾಡಿದ ಕಾರ್ಕಳ ತಂಡ

ಕಾರ್ಕಳ ಪರಪುವಿನ ರಾಜೇಶ್ ರಾವ್ ಅವರ ನೇತೃತ್ವದಲ್ಲಿ ಪರಪು ಹಾಗೂ ಕುಕ್ಕುಂದೂರು ಗ್ರಾಮದ ಜನರು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಫಲ-ಪುಷ್ಪಗಳನ್ನು ಕಾಣಿಕೆಯಾಗಿ ಅರ್ಪಿಸಿ, ಕಳೆದ ಹಲವು ವರ್ಷಗಳಿಂದ ಲೋಪಗೊಂಡಿದ್ದ ಈ ಸಂಪ್ರದಾಯಕ್ಕೆ ಮತ್ತೆ ಚಾಲನೆ ನೀಡಿದರು.

ಶ್ರೀಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಈ ಸಂದರ್ಭದಲ್ಲಿ ಸಂತೋಷದಿಂದ ಭಕ್ತರಿಗೆ ಆಶೀರ್ವಾದ ನೀಡಿದರು.

ಸ್ವಾಮೀಜಿಯವರು ತಿಳಿಸಿದಂತೆ, ಚಾತುರ್ಮಾಸ್ಯದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ತಮಿಳುನಾಡಿನಿಂದ ಒಂದು ಕುಟುಂಬ ಮಾತ್ರ ಬರುತ್ತಿತ್ತು. ಆದರೆ ಅವರು ಮಠಾಧೀಶರಾದ ನಂತರ ಕಾರ್ಕಳದಿಂದ ಮೊದಲ ಬಾರಿಗೆ ರಾಜೇಶ್ ರಾವ್ ಅವರ ನೇತೃತ್ವದಲ್ಲಿ ಒಂದು ತಂಡ ಬಂದು ಅವರನ್ನು ಭೇಟಿಯಾಗಿರುವುದು ಅವರಿಗೆ ಬಹಳ ಸಂತೋಷ ತಂದಿದೆ ಎಂದು ಹೇಳಿದರು.

ಮುಂದಿನ ವರ್ಷವೂ ದೇವರ ದಯೆಯಿಂದ ಇದೇ ರೀತಿಯಲ್ಲಿ ಎಲ್ಲರೂ ಬಂದು ಭೇಟಿಯಾಗಬೇಕು ಎಂದು ಹಾರೈಸಿ, ಭಕ್ತರಿಗೆ ಆಶೀರ್ವಾದ ನೀಡಿ ಕಳುಹಿಸಿದರು.

Related posts

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಸಭೆ

Madhyama Bimba

ನೀಟ್ ವಿಚಾರದಲ್ಲಿ ವಿದ್ಯಾರ್ಥಿಗಳ ಬಗ್ಗೆ ಬಿಜೆಪಿ ವಿರೋಧ ನಿಲುವು ಖಂಡನೀಯ

Madhyama Bimba

ಚತುಶ್ಪಥ ಕಾಮಗಾರಿ ಅವೈಜ್ಞಾನಿಕ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More