ಮೂಡುಬಿದಿರೆ

ಮೂಡಬಿದಿರೆಯಲ್ಲಿ ನೋಟರಿ ವಕೀಲರಾದ ಸುರೇಶ್ ಕೆ. ಪೂಜಾರಿಯವರ ಕಚೇರಿ ಸ್ಥಳಾಂತರ

ಮೂಡಬಿದಿರೆ: ಹೆಸರಾಂತ ನೋಟರಿ ಹಾಗೂ ವಕೀಲರಾದ ಸುರೇಶ್ ಕೆ. ಪೂಜಾರಿ ಅವರ ನೂತನ ಕಚೇರಿ” ಮೂಡುಬಿದಿರೆ ಪುರಸಭೆ ಎದುರು ಇರುವ ಫಾರ್ಚೂನ್ ನೀತಿ ಹೈಟ್ಸ್,” ಸ್ಥಳಾಂತರಗೊಂಡಿದ್ದು, ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.


ಸುರೇಶ್ ಕೆ. ಪೂಜಾರಿ ಅವರ ಮಾತೃಶ್ರೀ ಶ್ರೀಮತಿ ಸುಂದರಿ ಕೆ. ಪೂಜಾರಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಚೇರಿ ಉದ್ಘಾಟಿಸಿದರು.

ನೂತನ ಕಚೇರಿಯಲ್ಲಿ ಕಾನೂನು ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ಜನಸ್ನೇಹಿಯಾಗಿ ಒದಗಿಸುವ ಉದ್ದೇಶದಿಂದ ಕಚೇರಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ಅವರು ಶುಭ ಹಾರೈಸಿ ಮಾತನಾಡಿ, ಸುರೇಶ್ ಕೆ. ಪೂಜಾರಿ ಅವರು ಕಾನೂನು ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿ ಹಾಗೂ ನೂತನ ಕಚೇರಿ ಉತ್ತಮವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಬಿ. ಶೀನ ಪೂಜಾರಿ, ರಾಜಶೇಖರ ಮಧ್ಯಸ್ಥ, ಸುಧಾಕರ ಕೆ. ಪೂಜಾರಿ,ವಾಸು ಪೂಜಾರಿ,ಉದ್ಯಮಿಗಳಾದ ಪ್ರೀತಿ ಕ್ಯಾಟರರ್ಸ್‌ನ ರವೀಂದ್ರ ಕರ್ಕೇರ, ರೋಹನ್ ಅತಿಕಾರಬೆಟ್ಟು, ಗಿರೀಶ್ ಕುಮಾರ್ ಹಂಡೇಲು, ನವೀನ್ ಪಿ. ಕುಂದರ್ ರಾಜೇಂದ್ರ ಬಂಗೇರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಸುರೇಶ್ ಕೆ. ಪೂಜಾರಿ ಅವರಿಗೆ ಶುಭಾಶಯಗಳನ್ನು ಸಲ್ಲಿಸಿದರು.

ಸಹೋದರ ಸಂಬಂಧಿಗಳಾದ ರಮೇಶ್ ಕೆ. ಪೂಜಾರಿ, ಶ್ರೀಮತಿ ಸಂಗೀತ ರಮೇಶ್, ಕಿರಣ್, ಆಶಿಶ್, ಪತ್ನಿ ಶ್ರೀಮತಿ ಜಯಶ್ರೀ ಸುರೇಶ್, ಪುತ್ರ ಸುಜ್ಞಾನ್, ನ್ಯಾಯವಾದಿ ಸುರೇಶ್ ಜಿ.ಕೆ., ಸುಪ್ರಿಯಾ ಸೇರಿದಂತೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತುಷಾರ್ ಪ್ರಾರ್ಥನೆ ನೆರವೇರಿಸಿದರು. ಸುರೇಶ್ ಕೆ. ಪೂಜಾರಿ ಅವರು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರೋಹನ್ ಅತಿಕಾರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. .
.

Related posts

ಮಾದಕ ವಸ್ತು- ದೇಶದ ಭವಿಷ್ಯತ್ತಿಗೆ ಮಾರಕ: ವಿನ್ಸೆಂಟ್ ವಿವೇಕ್ ಪಾಯಸ್

Madhyama Bimba

ಜುಲೈ1:ಮೂಡುಬಿದಿರೆಯಲ್ಲಿ ಪತ್ರಿಕಾ ದಿನಾಚರಣೆ

Madhyama Bimba

ಮೂಡುಬಿದಿರೆ ಲಯನ್ಸ್, ಲಿಯೋ ಕ್ಲಬ್ ಪದಗ್ರಹಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More