Blog

ಮೇಘ ಸ್ಪೋಟ

ವರದಿ : ಸುಕುಮಾರ್ ಮುನಿಯಾಲು

ಮುದ್ರಾಡಿ : ಮೇಘ ಸ್ಪೋಟ : ಭಾರಿ ಹಾನಿ : ನೀರಿನಲ್ಲಿ ಕೊಚ್ಚಿ ಹೋದ ಕಾರು.

ಮುದ್ರಾಡಿಯಲ್ಲಿ ಭಾನುವಾರ ಮಧ್ಯಾಹ್ನ 2.30 ರಿಂದ 3.45 ವರೆಗೆ ಸುರಿದ ಭಾರಿ ಮಳೆಯಿಂದಾಗಿ ಭಾರಿ ಹಾನಿಯಾಗಿದೆ. ಮುದ್ರಾಡಿಯ ಹೊಸ ಕಂಬ್ಲದಲ್ಲಿ 1, ಕಾಂತರಬೈಲಿನಲ್ಲಿ 4, ಕೆಲಕಿಲದಲ್ಲಿ 3ಮನೆಗಳು ಅರ್ಧದಷ್ಟು ಜಲಾವೃತ್ತಗೊಂಡಿದೆ.

ಮನೆಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ಹೊರ ಕರೆತರಲಾಗಿದೆ. ಭಾರೀ ಮಿಂಚು ಸಿಡಿಲು ಸಹಿತ ಮಳೆಯಾಗಿದೆ. 2 ಕಾರುಗಳು ಮತ್ತು ಬೈಕ್‌ ಗಳು ಒಂದೇ ಸವನೆ ನುಗ್ಗಿದ ನೀರಿನಲ್ಲಿ ಕೊಚ್ಚಿ ಹೋಗಿವೆ. ಯಾವೂದೇ ಪ್ರಾಣಾಹಾನಿಯಾಗಿಲ್ಲ. ಕಬ್ಬಿನಾಲೆಯ ಬೆಟ್ಟದಲ್ಲಿ ಮೇಘಸ್ಫೋಟದಿಂದ ಈ ರೀತಿಯಾಗಿದೆ. ಒಂದೇ ಸವನೆ ನೀರು ನುಗ್ಗಿ ಬಂದಿದೆ ಎಂದು ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಮುದ್ರಾಡಿ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅದ್ಯಕ್ಷೆ ವಸಂತಿ ಪೂಜಾರಿ, ಪಂಚಾಯತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್‌ ಕುಮಾರ್‌ ಕುಕ್ಕುಜೆ ಸ್ಥಳದಲ್ಲಿದ್ದಾರೆ. ಅಪಾರ ಹಾನಿ ಸಂಭವಿಸಿದೆ. ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್‌ ಆಗಿದ್ದು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಒಂದು ದನ ಹಟ್ಟಿಯೂ ಬಿದ್ದಿದೆ.

Related posts

ನವೆಂಬರ್ 15 ಅಂಡಾರು ನಲ್ಲಿ ವಿಚಾರ ಸಂಕಿರಣ

Madhyama Bimba

ಹೆರ್ಮುಂಡೆ ಬಳಿ ಬೈಕ್ ಕಾರು ಅಪಘಾತ

Madhyama Bimba

ನಿಟ್ಟೆ ಗ್ರಾಮ ಪಂಚಾಯತ್ ಉಪ ಚುನಾವಣೆ – ಬಿಜೆಪಿ ಪಾಲಿಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More