ಕಾರ್ಕಳ: ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭ ಮುಂಡ್ಕೂರು ಗ್ರಾಮದ ಮುಂಡೇಲ್ ಪಾಂಡು ಹೋಟೇಲ್ ಬಳಿ ರಾತ್ರಿ 08.30 ಗಂಟೆಗೆ ಸಂಕಲಕರಿಯ ಕಡೆಯಿಂದ ಬೆಳ್ಮಣ್ ಕಡೆಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಮಂಗಳೂರು ತಾಲೂಕಿನ ಕಿನ್ನಿಗೋಳಿ ಎಂಬಲ್ಲಿಂದ 8000/- ರೂಪಾಯಿ ಮೌಲ್ಯದ 3 ಯುನಿಟ್ ಮರಳನ್ನು ಕಳ್ಳತನ ಮಾಡಿ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಟಿಪ್ಪರ್ ಲಾರಿ ನಂಬ್ರ KA-19-AD-4490 ನೇಯದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

