ಕಾರ್ಕಳಹೆಬ್ರಿ

ಶ್ರೀ ಕ್ಷೇತ್ರ ವರಂಗ ಜೈನ ಮಠವನ್ನು ಧಾರ್ಮಿಕ ಯಾತ್ರಾ ಕ್ಷೇತ್ರ ಎಂದು ಪ್ರಕಟಿಸುವ ಕುರಿತು

ಹೆಬ್ರಿ ತಾಲೂಕಿನಲ್ಲಿರುವ ಜೈನರ ಪವಿತ್ರ ಕ್ಷೇತ್ರ ಇಲ್ಲಿಯ ಬಸದಿಗಳು ಮತ್ತು ಸ್ಮಾರಕಗಳು ಈತಿಹಾಸಿಕವಾಗಿ ಹುಂಚದ ಶ್ರೀ ಹೊಂಬುಜ ಜೈನ ಮಠದ ಶಾಖಾ ಮಠವಾಗಿರುವ ಶ್ರೀ ವರಂಗ ಜೈನ ಮಠದ ಅಧೀನ, ಆಡಳಿತ ಮಂಡಳಿ ಮತ್ತು ಸುಪರ್ದಿಯಲ್ಲಿದೆ.

ಕಳೆದ ಶತಮಾನದ ಹಿಂದಿನವರೆಗೂ ಜೈನ ಮಠವು ಜೈನಾಚಾರ್ಯರ ನೆಲೆಯಾಗಿ, ಧರ್ಮ-ಜ್ಞಾನಗಳ ಕೇಂದ್ರವಾಗಿದ್ದು, ಇಂತಹ ಇತಿಹಾಸ ಪ್ರಸಿದ್ಧಿ ವರಂಗ ಕ್ಷೇತ್ರದ ಪರಿಚಯ ಇನ್ನಿತರೆ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಪ್ರವಾಸಿ ತಾಣ ಎಂದು ಪ್ರಕಟಿಸಿರುವುದರಿಂದ ಎಲ್ಲಾ ರೀತಿಯ ಜನರು ಇಲ್ಲಿಗೆ ಭೇಟಿ ನೀಡುತ್ತಿರುವುದರಿಂದ ಇಲ್ಲಿಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ.


ಆದ್ದರಿಂದ ಮುಂದಿನ ದಿನಗಳಲ್ಲಿ ಶ್ರೀ ವರಂಗ ಜೈನ ಮಠದ ಕ್ಷೇತ್ರದ ಬಗ್ಗೆ ಪ್ರಕಟಿಸುವಾಗ ಪ್ರವಾಸಿ ತಾಣ ಎಂಬುದರ ಬದಲಾಗಿ ಧಾರ್ಮಿಕ ಯಾತ್ರಾ ಕ್ಷೇತ್ರ ಎಂಬುದಾಗಿ ಪ್ರಕಟಿಸುವಂತೆ ಪ್ರಕಟಣೆ ತಿಳಿಸಿದೆ.

Related posts

ಹೆಬ್ರಿ: ಅನಾರೋಗ್ಯ- ಆತ್ಮಹತ್ಯೆ

Madhyama Bimba

ಕಾರ್ಕಳ ನಿಟ್ಟೆಯಲ್ಲಿ ಗುಂಪಿನಿಂದ ಯುವಕನ ಮೇಲೆ ಹಲ್ಲೆ- ಜೀವ ಬೆದರಿಕೆ

Madhyama Bimba

ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More