ಕಾರ್ಕಳ

ಅಂತಿಮ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ರಕ್ಷಾ ಶೆಟ್ಟಿ ತೇರ್ಗಡೆ

ನವಂಬರ್ ತಿಂಗಳಲ್ಲಿ ನಡೆದ ಅಂತಿಮ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ (ಸಿಎ ಫೈನಲ್) ರಕ್ಷಾ ಶೆಟ್ಟಿ ತೇರ್ಗಡೆಯಾಗಿದ್ದಾರೆ.

ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೈಲೂರು ಬಿಇಎಂ ಶಾಲೆ ಮತ್ತು ಕೆಎಂಇಎಸ್ ಶಾಲೆಯಲ್ಲಿ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಜ್ಞಾನಸುಧಾ ಕಾಲೇಜು ಮತ್ತು ಬಿ.ಕಾಂ ಪದವಿಯನ್ನು ಆಳ್ವಾಸ್‌ನಲ್ಲಿ ಪೂರೈಸಿದ್ದರು.

ಆರ್ಟಿಕಲ್‌ಶಿಪ್‌ನ್ನು ಕಾರ್ಕಳದ ಸಿ.ಎ ರಮೇಶ್‌ರಾವ್ ಹಾಗೂ ಅಶೋಕ್ ಶೆಟ್ಟಿ ಆ್ಯಂಡ್ ಕಂಪೆನಿ ಮುಂಬೈ ಇವರ ಮಾರ್ಗದರ್ಶನದಲ್ಲಿ ಪಡೆದಿರುತ್ತಾರೆ.

ರಕ್ಷಾ ಶೆಟ್ಟಿ ಬೈಲೂರು ಸೌಂದರ್‍ಯ ಕಾಂಪ್ಲೆಕ್ಸ್‌ನ ಮಾಲಕರಾದ ರಮೇಶ್ ಶೆಟ್ಟಿ ಹಾಗೂ ಶಾಲಿನಿ ಶೆಟ್ಟಿ ದಂಪತಿಯವರ ಪುತ್ರಿ.

Related posts

ಕಾರ್ಕಳ ಜ್ಞಾನಸುಧಾದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

Madhyama Bimba

ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆ

Madhyama Bimba

ನ. 11: ಕಾರ್ಕಳ ತಾಲೂಕು ಮಟ್ಟದ ಪಿಂಚಣಿ ಅದಾಲತ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More