ಮೂಡುಬಿದಿರೆ

ಹೊಸ ವರ್ಷಾಚರಣೆ ಹೆಸರಿನಲ್ಲಿ ಅಕ್ರಮ ಚಟುವಟಿಕೆ: ಸಮಿತ್ ರಾಜ್ ಎಚ್ಚರಿಕೆ

ಹೊಸ ವರ್ಷಾಚರಣೆಯ ಹೆಸರಿನಲ್ಲಿ ನಡೆಯುವ ಡ್ರಗ್ಸ್, ಗಾಂಜಾ ಮಾಫಿಯಾ ಮತ್ತು ಅನೈತಿಕ ಚಟುವಟಿಕೆಗಳ ಬಗ್ಗೆ ಜಾಗೃತೆ ವಹಿಸುವಂತೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷದ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅನೈತಿಕ ಚಟುವಟಿಕೆಯ ಮಾಫಿಯ ಸಕ್ರೀಯಗೊಳ್ಳುವ ಸೂಚನೆ ಲಭಿಸಿರುವುದಾಗಿ ಅವರು ತಿಳಿಸಿದ್ದಾರೆ. ಹೊಸವರ್ಷಾಚರಣೆ ಹೆಸರಿನಲ್ಲಿ ಯಾವುದೇ ರೀತಿಯ ಪಾರ್ಟಿಗಳನ್ನು ತಡರಾತ್ರಿಯವರೆಗೆ ರೆಸಾರ್ಟ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಅನುಮತಿಯನ್ನು ಸಂಬಂಧ ಪಟ್ಟ ಇಲಾಖೆಗಳು ಅವಕಾಶ ನೀಡಬಾರದು, ಒಂದು ವೇಳೆ ಅವಕಾಶ ನೀಡಿದ್ದಲ್ಲಿ ಸಾರ್ವಜನಿಕರು ಸೇರಿ ಕಾರ್ಯಕ್ರಮ ವನ್ನು ತಡೆಯುವಾಗ ಅಲ್ಲಿ ಆಗುವ ಅನಾಹುತಕ್ಕೆ ನೇರ ಇಲಾಖೆಯೇ ಕಾರಣವಾಗುತ್ತದೆ ಎಂದು ಕೂಡ ಅವರು ಎಚ್ಚರಿಸಿದ್ದಾರೆ.

Related posts

ಚಿನ್ನದ ವ್ಯವಹಾರ ನಿರತ ಸೀತಾರಾಮ್ ಇನ್ನಿಲ್ಲ

Madhyama Bimba

ಕಿನ್ನಿಗೋಳಿಯಲ್ಲಿ ಮೇಲೈಸಿದ ರಾಜ್ಯಮಟ್ಟದ ಮಕ್ಕಳ ಹಬ್ಬ- ಹಲವು ಪ್ರತಿಭೆಗಳ ಅನಾವರಣ

Madhyama Bimba

ಸರಕಾರಿ ಬಸ್ಸು : ರೈತ ಸೇನೆ ಮನವಿಗೆ ಸ್ಪಂದನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More