ಕಾರ್ಕಳ

ಅಕ್ರಮ ಮರಳು ಸಾಗಾಟ: ಬೈಲೂರು ಕೌಡೂರು ಹಾಗೂ ಕಾರ್ಕಳದಲ್ಲಿ 2 ಪ್ರಕರಣ ದಾಖಲು- ಮರಳು ಲಾರಿ ವಶ

ಅಕ್ರಮ ಮರಳು ಸಾಗಾಟ ಸಂಬಂಧಿಸಿದಂತೆ ಕಾರ್ಕಳ ಹಾಗೂ ಕೌಡೂರಿನಲ್ಲಿ ಜ. 3ರಂದು 2 ಪ್ರಕರಣಗಳು ದಾಖಲಾಗಿವೆ.


ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ  ಸರ್ವಜ್ಞ ಸರ್ಕಲ್ ಬಳಿ  ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿಗಳು  ಕೆಎ-19 ಡಿ-9245  ನೇ ನಂಬ್ರದ ಟಿಪ್ಪರ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದು ಈ ಸಂದರ್ಭ ಪೊಲೀಸರನ್ನು ಕಂಡು ಕಳವು ಮಾಡಿದ ಮರಳಿನೊಂದಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಪೊಲೀಸರು ತಡೆದು ಮರಳು ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.


ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆ ಮಾಡುತ್ತಿದ್ದ ಸಂದರ್ಭ ಬೈಲೂರು ಕಡೆಯಿಂದ ಹಿರಿಯಡ್ಕ ಕಡೆಗೆ ಹೋಗುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮರಳು ತುಂಬಿದ ಲಾರಿ ಆಗಿರುವುದರಿಂದ ಲಾರಿ ಹಾಗೂ ಮರಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ.

ಈ ಎರಡು ಪ್ರಕರಣಗಳು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related posts

ರೋಟರಿ ಕ್ಲಬ್ ವತಿಯಿಂದ ಕಾರ್ಕಳ ಜ್ಞಾನಸುಧಾದಲ್ಲಿ ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಮಾಹಿತಿ

Madhyama Bimba

ಬೈಲೂರು ಕಾಲೇಜಿನಲ್ಲಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ

Madhyama Bimba

ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಭೇಟೆ- ಭೇಟೆಗಾರರ ಬಂಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More