ಬೈಲೂರು: ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ನೀರೆ ರವೀಂದ್ರ ನಾಯಕ್ ಉಪಾಧ್ಯಕ್ಷರಾಗಿ ಎನ್. ವಿವೇಕಾನಂದ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರವೀಂದ್ರ ನಾಯಕ್ ಈ ಹಿಂದೆ ಸಂಘದಲ್ಲಿ ಎರಡುವರೆ ವರ್ಷ ಅಧ್ಯಕ್ಷರಾಗಿ ಹಾಗೂ ಕಳೆದ ಅವಧಿಯಲ್ಲಿ 5 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದೀಗ ಮತ್ತೊಮ್ಮೆ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎನ್. ವಿವೇಕಾನಂದ ಶೆಟ್ಟಿ ಕಳೆದ ಅವಧಿಯಲ್ಲಿ ನಿರ್ದೇಶಕರಾಗಿದ್ದರು. ಇದೀಗ ಮುಂದಿನ 5 ವರ್ಷದ ಅವಧಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜ. 23ರಂದು ಸಂಘದಲ್ಲಿ ನೂತನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ವಿನಯ ಕುಮಾರ್ ಶೆಟ್ಟಿ, ಉದಯ ಕುಮಾರ್ ಹೆಗ್ಡೆ, ಶಾಂತರಾಮ್ ಶೆಟ್ಟಿ, ಸುರೇಶ್ ಶೆಟ್ಟಿ, ಕಿಶನ್, ದೇವೇಂದ್ರ ನಾಯಕ್, ಎನ್. ಬಿ. ಬಾಬು, ವಿನೋದ ಪೂಜಾರ್ತಿ, ಶಾಂತ, ಶಂಕರ್ ನಾಯಕ್, ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಪ್ರತಿನಿಧಿ ವಲಯ ಮೇಲ್ವಿಚಾರಕರಾದ ಜಯಂತ್ ಕುಮಾರ್ ಉಪಸ್ಥಿತರಿದ್ದರು.