ಬೈಲೂರು: 2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಯುವ ಸಂಗಮ (ರಿ.) ಕೌಡೂರು ಇದರ ಸದಸ್ಯರು ಖ್ಯಾತ ದೈವ ನರ್ತಕರಾದ ಬೂಬ ಪರವ ಇವರನ್ನು ಯುವ ಸಂಗಮ (ರಿ.) ಕೌಡೂರು ಸಂಘದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ, ಕಾರ್ಯದರ್ಶಿ ನಾಗೇಶ್ ಪೂಜಾರಿ, ಕೋಶಾಧಿಕಾರಿ ಕೃಷ್ಣ ಶೆಟ್ಟಿ ಹಾಗೂ ಸಂಘದ ಗೌರವ ಸಲಹೆಗಾರರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
