ಮುದ್ರಾಡಿ : ಮೂಡಬಿದರೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮುದ್ರಾಡಿ ನೈದಿಲ್ ಪೂಜಾರಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ೭೦ ಕೆಜಿ ವಿಭಾಗದ ವಿಟಿಯು ರಾಜ್ಯಮಟ್ಟದ ದೇಹ ದಾರ್ಢ್ಯ ಸ್ಫರ್ಧೆಯಲ್ಲಿ ” ಚಿನ್ನದ ಪದಕದೊಂದಿಗೆ ಮೋಸ್ಟ್ ಮಸ್ಕ್ಯುಲರ್ ಮ್ಯಾನ್ ಪಟ್ಟ ” ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಮುದ್ರಾಡಿಯ ಶೋಭಾ ಮತ್ತು ಸುಕುಮಾರ್ ಪೂಜಾರಿ ಅವರ ಪುತ್ರ. ಜಿವೈಎಂ ಮೂಡಬಿದರೆಯ ಸ್ವಾಮಿ ಸ್ಟ್ರೆಂತ್ ಆಂಡ್ ಟ್ರೈನಿಂಗ್ ಜಿಮ್ ನ ಸ್ವಾಮಿ ಪ್ರಸಾದ್ ಅವರಿಂದ ತರಬೇತು ಪಡೆದಿದ್ದಾರೆ.

