ಬೈಲೂರು: ಕರಕರಿ ಫ್ರೆಂಡ್ಸ್ ಸೇವಾ ಬಳಗ ಕರ್ನಾಟಕ ಇವರ ನೇತೃತ್ವದಲ್ಲಿ ಗೋವಿಂದೂರು ಶ್ರೀ ಅನಂತಮತಿ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಯರ್ಲಪಾಡಿ ಯುವಕ ಮಂಡಲ ಗೋವಿಂದೂರು ಇವರ ಸಹಕಾರದೊಂದಿಗೆ ಕರಕರಿ ಫ್ರೆಂಡ್ಸ್ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿ. 28ರಂದು ಗೋವಿಂದೂರು ಶ್ರೀಅನಂತಮತಿ ಶಾಲಾ ಮೈದಾನದಲ್ಲಿ ಪೂರ್ವಾಹ್ನ ಗಂಟೆ 9.00ರಿಂದ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ 9.00ಗಂಟೆಯಿಂದ ಸ್ಥಳೀಯ ಸಂಘ ಸಂಸ್ಥೆಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಸಂಜೆ 4.00ರಿಂದ ಕಾರ್ಕಳ ತಾಲೂಕು ಮಟ್ಟದ ಹಗ್ಗಜಗ್ಗಾಟ ಪಂದ್ಯ ನಡೆಯಲಿದೆ. ಪಂದ್ಯಾಟವು ತಾಲೂಕು ಮಟ್ಟದ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದೆ.

ಸಾಂಸ್ಕೃತಿಕ ಅಂಗವಾಗಿ ಸಾಯಂಕಾಲ 7.00ರಿಂದ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಂತರ ಕಲಾಶ್ರೀ ಕುಸಲ್ದ ಕಲಾವಿದೆರ್ ಬೆದ್ರ ಇವರಿಂದ ‘ನಾಲಾಯಿ ಮಗುರುಜಿ; ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
