ಅಜೆಕಾರು ಪದ್ಮನಗರದ “ಜ್ಞಾನಸುಧಾ” ಆವರಣದಲ್ಲಿ ನೇಮೊಟ್ಟು ದಿವಂಗತ ಸಂಪಾವತಿ ಶೆಡ್ತಿಯವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಲಾದ ಬಸ್ಸುತಂಗುದಾಣದ ಉದ್ಘಾಟನಾ ಸಮಾರಂಭವು ಜ.2 ಶುಕ್ರವಾರ ನೆರವೇರಿತು.

ಕಾರ್ಯಕ್ರಮವನ್ನು ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಜೆಕಾರು ಶ್ರೀ ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ತಂದೆ ತಾಯಿಯನ್ನು ನೋಡಿಕೊಂಡವರಿಗೆ ಯಾವತ್ತೂ ಶ್ರೇಯಸ್ಸು ಉಂಟಾಗುತ್ತದೆ, ಆ ನಿಟ್ಟಿನಲ್ಲಿ ತಾಯಿಯ ಸವಿನೆನಪಿಗಾಗಿ ಅವರ ಪತಿ ಮತ್ತು ಮಕ್ಕಳು ಮಾಡಿರುವ ಈ ಕಾರ್ಯ ಒಂದು ಮಾದರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ,ಉದ್ಯಮಿಗಳು ಪ್ರಗತಿ ಗಣೇಶ್ ಟ್ರೇಡ್ ಸೆಂಟರ್ ಅಜೆಕಾರು ಸಂಸ್ಥೆಯ ಸುಜಯ್ ಶೆಟ್ಟಿ, ನಂದಕುಮಾರ್ ಹೆಗ್ಡೆ , ಸಂಪಾವತಿ ಶೆಡ್ತಿ ಕುಟುಂಬಿಕರು, ಅಜೆಕಾರು ಭಾಗದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


