ಕಾರ್ಕಳ: ವ್ಯಕ್ತಿಯೋರ್ವರು ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಜ. 14ರಂದು ವರದಿಯಾಗಿದೆ.
ಅಸ್ಸಾಂನ ಸ್ವಂಕಾರ್ ಬಸುಮತ್ರಿ (29) ಮೃತಪಟ್ಟವರು.

ಇವರು ಹೆಬ್ರಿಯ ಶಿವಪುರದ ಶಿವ ಎಲೆಕ್ಟ್ರಿಕಲ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಇವರು ಬಜಗೋಳಿಯ ಅಬ್ಬೆಂಜಾಲು ಎಂಬಲ್ಲಿ ಹಳೆ ಕೆ.ಇ.ಬಿ. ಕಂಬದ ಪಕ್ಕದಲ್ಲಿ ಹೊಸದಾಗಿ ಕೆ.ಇ.ಬಿ. ಕಂಬ ಅಳವಡಿಸಿ, ಕಂಬದಲ್ಲಿ ಕೆಲಸ ಮಾಡಿಕೊಂಡಿರುವಾಗ ವಿಪರೀತ ಸಿಡಿಲು, ಗುಡುಗು, ಮಳೆ ಬರುತ್ತಿದ್ದು ಈ ಸಮಯ ಸಿಡಿಲು ಯಾ ಇತರೇ ಕಾರಣದಿಂದ ಅಕಸ್ಮಿಕವಾಗಿ ವಿದ್ಯುತ್ ಕಂಬದ ಮೇಲಿನಿಂದ ಕೆಳಕ್ಕೆ ಬಿದ್ದು, ತೀವ್ರ ಅಸ್ವಸ್ಥಗೊಂಡ ಇವರನ್ನು ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ. ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಗಾಯಾಳು ಸ್ವಂಕಾರ್ ಬಸುಮತ್ರಿ ಇವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
