ಬೈಲೂರು ಬಿ.ಇ.ಯಂ ಶಿಕ್ಷಣ ಸಂಸ್ಥೆಗಳ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಲ| ಗುರುಪ್ರಾಸಾದ್ ಶೆಟ್ಟಿ ಜಾರ್ಕಳ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಬಿ.ಹೈದರಾಲಿ, ಲ| ಪ್ರಶಾಂತ್ ಕುಮಾರ್ ಶೆಟ್ಟಿ ಗುತ್ತುಮನೆ ಬೈಲೂರು, ಗೌರವ ಸಲಹೆಗಾರರಾಗಿ, ಲ| ಸತೀಶ್ ಶೆಟ್ಟಿ ಸಂಭ್ರಮ ಆಯ್ಕೆಯಾಗಿದ್ದಾರೆ. ಜ.17ರಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಜಯ್ ಜತ್ತನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಕಿಣಿ, ಗೌರವಾಧ್ಯಕ್ಷರಾದ ಭೊಜ ಶೆಟ್ಟಿ, ಎರ್ಲಪಾಡಿ, ಕಾರ್ಯದರ್ಶಿ ಫೈಸಲ್, ಜತೆಕಾರ್ಯದರ್ಶಿ ಆಶಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶ್ಯಾಲೆಟ್ ಮತ್ತು ಯಶೋಧ ಆಚಾರ್ಯ ಸಂಸ್ಥೆಯ ಗೌರವಾಧ್ಯಕ್ಷೆ ಪ್ರೇಮಲತಾ ಜತ್ತನ್ನ, ಮುಖ್ಯಶಿಕ್ಷಕ ಬಿ. ಸುಬ್ರಹ್ಮಣ್ಯ ಪ್ರಭು, ನರ್ಸರಿ ಶಾಲಾ ಮುಖ್ಯಶಿಕ್ಷಕಿ ರೇಖಾ. ಎಂ ಕೋಟೆಗಾರ್ ಉಪಸ್ಥಿತರಿದ್ದರು.
ಅನಿತ ಪ್ರಭು ಕಾರ್ಯಕ್ರಮ ನಿರ್ವಹಿಸಿದರು, ಕಛೇರಿ ಮುಖ್ಯಸ್ಥೆ ದಿವ್ಯ, ಶಿಕ್ಷಕಿ ಸುಕೇತ , ಮಮಿತ ಸಹಕರಿಸಿದರು, ಉಪ ಪ್ರಾಂಶುಪಾಲೆ ಲವಿನ ಮರಿಯ ಧನ್ಯವಾದ ವಿತ್ತರು.
