ಬೈಲೂರು: ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ನೀರೆ ಬೈಲೂರು ಇಲ್ಲಿಯ ನಂದಾ ದೀಪ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷರು, ಬೈಲೂರು ಜೂನಿಯರ್ ಕಾಲೇಜು ಬಳಿಯ ನಿವಾಸಿ ಪ್ರಫುಲ್ಲ ಆಚಾರ್ಯ (66 ವ) ಜ.22ರಂದು (ಇಂದು ಬೆಳಿಗ್ಗೆ) ಹೃದಯಾಘಾತದಿಂದ ನಿಧನರಾದರು
ಮೃತರು ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಪತಿ ರಾಘವೇಂದ್ರ ಆಚಾರ್ಯರು 18 ದಿನಗಳ ಹಿಂದೆ ನಿಧನರಾಗಿದ್ದರು. 18 ದಿನಗಳ ಅಂತರದಲ್ಲಿ ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ.
