ಕಾರ್ಕಳಹೆಬ್ರಿ

ಪಡುಕುಡೂರು ಡೈರಿ ಅಧ್ಯಕ್ಷರಾಗಿ ಜಗದೀಶ ಹೆಗ್ಡೆ

ಹೆಬ್ರಿ : ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ೩ನೇ ಅವಧಿಗೆ ಜಗದೀಶ ಹೆಗ್ಡೆ ಪಟೇಲರ ಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಸಹಕಾರಿ ದುರೀಣ ಜಗದೀಶ ಹೆಗ್ಡೆ ಪಡುಕುಡೂರು ಡೈರಿಯ ಸ್ಥಾಪನೆಯ ರೂವಾರಿಯಾಗಿದ್ದಾರೆ. ಕಾರ್ಕಳದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಮಿತ್ರ ಕುಮಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಡೈರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾರದಾ ಚಂದ್ರ ಶೆಟ್ಟಿ ಸಹಕರಿಸಿದರು.


ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಕಾರ್ಕಳ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿಯೂ ಜಗದೀಶ ಹೆಗ್ಡೆ ಸೇವೆ ಸಲ್ಲಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ ಎಂ.ಶೆಟ್ಟಿ, ನಿರ್ದೇಶಕರಾಗಿ ಹೃದಯ ಕುಮಾರ್ ಶೆಟ್ಟಿ, ಸುಕೇಶ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸಂತೋಷ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಕಾಶ ಶೆಟ್ಟಿಗಾರ್, ಸುರೇಶ ಪೂಜಾರಿ, ಸುಮತಿ ಶೆಟ್ಟಿ, ಸುಜಾತ ಶೆಟ್ಟಿ ಆಯ್ಕೆಯಾಗಿದ್ದಾರೆ.

Related posts

ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೆ ಸಿದ್ದಗೊಂಡಿದೆ ಕಾರ್ಕಳದ ಡಾ.ಬಿ. ಆರ್. ಅಂಬೇಡ್ಕರ್ ಭವನ

Madhyama Bimba

ಬಹುಕಾಲದ ಬೇಡಿಕಯಾಗಿದ್ದ 8 ಕಾಲುಸಂಕ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ: ಧನ್ಯವಾದ ತಿಳಿಸಿದ ಉದಯ ಶೆಟ್ಟಿ ಮುನಿಯಾಲು

Madhyama Bimba

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More