ಕಾರ್ಕಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಂಟೇನರ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಫೆ. 19ರಂದು ವರದಿಯಾಗಿದೆ.
ಅಜ್ಮಲ್ ಗಾಯಗೊಂಡವರು.
ಹೆಜಮಾಡಿಯ ಯತೀಶ (34) ಹಾಗೂ ಅಜ್ಮಲ್ರವರು ಬೊಲೆರೋ ಪಿಕ್ ಅಪ್ ವಾಹನದಲ್ಲಿ ಪಡುಬಿದ್ರೆ ಕಡೆಗೆ ಬರುತ್ತಿರುವಾಗ ಬೆಳ್ಮಣ್ ಪೆರಾಲ್ಪಾದೆ ಬಳಿ ಪಿಕ್ ಅಪ್ ವಾಹನದಲ್ಲಿ ಸಮಸ್ಯೆ ಉಂಟಾದ ಕಾರಣ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಿಶೀಲಿಸುತ್ತಿರುವಾಗ ಅಜ್ಮಲ್ ರವರು ವಾಹನದ ಹಿಂಭಾಗದಲ್ಲಿ ನಿಂತುಕೊಂಡಿದ್ದರು. ಈ ಸಂದರ್ಭ ಕಂಟೇನರ್ ಲಾರಿ ಚಾಲಕ ಅಬ್ಬಾಸ್ ಅತೀವೇಗ ಚಲಾಯಿಸಿಕೊಂಡು ಬಂದು ಅಜ್ಮಲ್ ರವರಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಅಜ್ಮಲ್ ಗಾಯಗೊಂಡಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
