ಹೆಬ್ರಿ : ಶಿವಪುರ ಪಾಂಡುಕಲ್ಲು ಮನೆತನದ ಸ್ವಯಂಭೂ ಶ್ರೀ ಕೋಟಿನಾಥೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಇತ್ತೀಚೆಗೆ ಮಣಿಪಾಲದ ವೇದ ಪಾರಾಯಣ ತಂಡದಿಂದ
ರುದ್ರ ಪಠಣ ಕಾರ್ಯಕ್ರಮ ನಡೆಯಿತು.
ಪ್ರೊ. ಬೈಂದೂರು ರಾಘವೇಂದ್ರ ಹೊಳ್ಳ ಮಣಿಪಾಲ 28 ಸದಸ್ಯರ ವೇದ ಪಾರಾಯಣ ತಂಡದ ನೇತ್ರತ್ವ ವಹಿಸಿದ್ದರು.
ವ್ಯವಸ್ಥಾಪಕರಾದ ಅರ್ಚಕ ಶಂಕರ ಬಡ್ಕಿಲ್ಲಾಯ ನೇತ್ರತ್ವದಲ್ಲಿ ಶಂಕರ ಬಡ್ಕಿಲ್ಲಾಯ ರುದ್ರಾಭಿಷೇಕ ಗೈದರು. ಮನೆತನದ ಹಿರಿಯರಾದ ಹರಿದಾಸ ಬಡ್ಕಿಲ್ಲಾಯ ಚಂದ್ರಶೇಖರ ರಾಯ ತಂಡದವರಿಗೆ ಮಹಾ ಪ್ರಸಾದ ನೀಡಿ ಶುಭ ಹಾರೈಸಿದರು. ಗುರುಪ್ರಸಾದ ಬಡ್ಕಿಲ್ಲಾಯ. ವಸಂತ ಬಡ್ಕಿಲ್ಲಾಯ, ಅನಿಕೇತ ಉಡುಪ ಕೆರೆಮನೆ ಕಿನ್ನಿಗೋಳಿ ಹಾಗೂ ಡಾ.ರಾಘವೇಂದ್ರ ಬಡ್ಕಿಲ್ಲಾಯ ಸಹಕರಿಸಿದರು.
