ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶ್ರೇಯಾoಕ್ ಆರ್ ಶೆಟ್ಟಿ 592 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ್ಯಾಂಕ್ ಗಳಿಸಿದ್ದಾರೆ
ಇವರು ಬಜಗೋಳಿಯ ಡಾ. ರವೀಂದ್ರ ಶೆಟ್ಟಿ ಹಾಗೂ ರೂಪ ರವೀಂದ್ರ ಶೆಟ್ಟಿ ದಂಪತಿಗಳ ಪುತ್ರ
ಡಾ ರವೀಂದ್ರ ಶೆಟ್ಟಿ ದಂಪತಿಗಳ ಪುತ್ರಿಯರಾದ ಸ್ನೇಹ ಆರ್ ಶೆಟ್ಟಿ ಮಂಗಳೂರು ವಲಯಕ್ಕೆ ಪ್ರಥಮ ಹಾಗೂ ಇನ್ನೊಬ್ಬ ಪುತ್ರಿ ಶ್ರೇಯ ಆರ್ ಶೆಟ್ಟಿ ಯವರು ಈ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದರು.
ಇವರೆಲ್ಲ ಬಜಗೋಳಿ ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಬಳಿಕ 8 ನೇ ತರಗತಿಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿ ಮೂವರು ಕೂಡಾ ರಾಂಕ್ ಗಳಿಸಿದ್ದರು
previous post
