ಕಾರ್ಕಳ: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ನಿಟ್ಟೆ ಸಮೀಪ ಅಟೋರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ರಿಕ್ಷಾದಲ್ಲಿದ್ದವರು ಗಾಯಗೊಂಡ ಘಟನೆ ಏ. 15ರಂದು ವರದಿಯಾಗಿದೆ.



ಸಾಣೂರಿನ ರಿಚಾರ್ಡ್ ಸ್ವಿಕೇರ (61) ತನ್ನ ಅಟೋ ರಿಕ್ಷಾದಲ್ಲಿ ಕವಿತಾ ಮತ್ತು ಅವರ ಸಣ್ಣ ಇಬ್ಬರು ಮಕ್ಕಳನ್ನು ಕುಳ್ಳಿರಿಸಿಕೊಂಡು ದೂಪದಕಟ್ಟೆಯಿಂದ ನಿಟ್ಟೆ ಪಂಚಾಯತ್ ಕಡೆಗೆ ಹೋಗುತ್ತಿರುವಾಗ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಅಟೋರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದಿದೆ.



ಡಿಕ್ಕಿಯ ಪರಿಣಾಮ ಅಟೋರಿಕ್ಷಾ ಮಗುಚಿ ಬಿದ್ದು, ರಿಚಾರ್ಡ್ ಸ್ವಿಕೇರ ಹಾಗೂ ಕವಿತಾ ಗಾಯಗೊಂಡಿದ್ದು, ಇಬ್ಬರು ಮಕ್ಕಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ.



ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
