ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಜಂಟಿಯಾಗಿ ಆಯೋಜಿಸಿದ ಮಹಾಭಾರತ ಭಾವದೀಪದ ಚತುರ್ಥ ಸೋಪಾನ ನೂರಾರು ಕಥೆಗಳು ಉಪನ್ಯಾಸ ಮಾಲಿಕೆ ಹೋಟೆಲ್ ಪ್ರಕಾಶದಲ್ಲಿ ನಡೆಯಿತು.
ಉಪನ್ಯಾಸಕರಾದ ಡಾ ವಿನಾಯಕ ಭಟ್ ಗಾಳಿಮನೆಯವರು ಕುಂತಿಗೆ ದೂರ್ವಾಸ ಮುನಿಗಳಿಂದ ಸಿಕ್ಕಿದ ೫ ವರಗಳು, ಕೌರವ ,ಪಾಂಡವರ ಹುಟ್ಟು, ವಿದುರ ನೀತಿಯ ಮಹತ್ವ, ವ್ಯಾಸರ ಕಾವ್ಯದ ಪಾರದರ್ಶಕತೆಗಳನ್ನು ಸೋದಾಹರಣವಾಗಿ ವಿವರಿಸಿದರು.
ವೇದಿಕೆಯಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ. ಮೊಗಸಾಲೆ. ಕಾರ್ಕಳ ಅಭಾಸಾಪದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು.
ಜಯರಾಮ್ ನಾಯಕ್ ರ ಶಾರದಾ ಸ್ತುತಿಯೊಂದಿಗೆ, ಅಭಾಸಾಪದ ಗೌರವ ಅಧ್ಯಕ್ಷರಾದ ನಿತ್ಯಾನಂದ ಪೈಯವರು ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿ, ಕಾರ್ಯದರ್ಶಿ ಸುಲೋಚನ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.
