ಕಾರ್ಕಳ: ಕಾರ್ಕಳ ಮೂರು ಮಾರ್ಗದ ಬಳಿ ಮೋಟಾರ್ ಸೈಕಲ್ಗೆ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮೇ. 07ರಂದು ವರದಿಯಾಗಿದೆ.
ತೆಳ್ಳಾರ್ ದುರ್ಗಾ ಗ್ರಾಮದ ಜನಾರ್ಧನ ಆಚಾರ್ (65) ಗಾಯಗೊಂಡವರು.
ಜನಾರ್ಧನ ರವರು ಮೋಟಾರ್ ಸೈಕಲ್ನಲ್ಲಿ ಕಾರ್ಕಳ ಮೂರು ಮಾರ್ಗದ ಬಳಿ ಗಾಂಧಿಮೈದಾನದ ಕಡೆಗೆ ಹೋಗುತ್ತಿರುವಾಗ ಆನೆಕೆರೆ ಕಡೆಯಿಂದ ಮೂರು ಮಾರ್ಗದ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.
ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ ಎ ಪೈ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
