ಕಾರ್ಕಳಹೆಬ್ರಿ

ಶಿವಪುರ ಎಲಿಕೋಡು ಮಠ: ಶಿಲಾಮಯ ಗರ್ಭಗೃಹ ಸಮರ್ಪಣೆ – ಹೊರೆಕಾಣಿಕೆ ಸಮರ್ಪಣೆ

ಶಿವಪುರ. : ಹೆಬ್ರಿ ತಾಲ್ಲೂಕಿನ ಶಿವಪುರ ಎಲಿಕೋಡು ಮಠದಲ್ಲಿ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ, ಪುನ:ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಕ್ರವಾರ ಆರಂಭಗೊಂಡಿದೆ.

ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಶುಕ್ರವಾರ ಸಂಜೆ ಮುಖಂಡರಾದ ಬೈಕಾಡಿ ಮಂಜುನಾಥ ರಾವ್ ಎಲಿಕೋಡು ನೇತ್ರತ್ವದಲ್ಲಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಎಲಿಕೋಡು ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ ಅವರು ಶಿವಪುರ ಪೇಟೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮೆರವಣಿಗೆಯಲ್ಲಿ ಎಲಿಕೋಡು ಮಠಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಶಿವಪುರದ ಭಜನಾ ತಂಡ ಮತ್ತು ವಾಧ್ಯ ಘೋಷಗಳ ತಂಡ ಮೆರವಣಿಗೆಗೆ ಮೆರುಗು ನೀಡಿತು.

ಬಳಿಕ ಎಲಿಕೋಡು ಮಠದಲ್ಲಿ ಅರ್ಚಕ ವೇದಮೂರ್ತಿ ವಾಸುದೇವಾ ಭಟ್ ಶಿವಪುರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ಸಲ್ಲಿಸಿ ಬ್ರಹ್ಮಕಲಶಾಭಿಷೇಕದ ವಿಧಿವಿಧಾನಗಳಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಎಲಿಕೋಡು ಮಠದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಎಲಿಕೋಡು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ, ಶ್ರೀನಾಥ್ ಎಲಿಕೋಡು, ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್, ವಿವಿಧ ಪ್ರಮುಖರಾದ ಸುರೇಶ ಶೆಟ್ಟಿ ಶಿವಪುರ, ಶ್ರೀನಿವಾಸ ಹೆಬ್ಬಾರ್ ಶಿವಪುರ, ಸಂತೋಷ ಕುಮಾರ್ ಶೆಟ್ಟಿ ನಾಯರಕೋಡು, ಶಂಕರನಾರಾಯಣ ಕೊಡಂಚ, ಸುನಂದ ಕುಲಾಲ್ ಶಿವಪುರ, ರಾಘವೇಂದ್ರ ಪ್ರಭು ಶಿವಪುರ, ಎಲಿಕೋಡು ಮಠದ ಪ್ರಮುಖರು, ವಿವಿಧ ಪ್ರಮುಖರು, ಗಣ್ಯರು, ಅರ್ಚಕ ವೃಂದದವರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Related posts

ಕಾರ್ಕಳ: ಮುಂಡ್ಕೂರು ಜಾರಿಗೆಕಟ್ಟೆ ಬಳಿ ಮೋಟಾರ್ ಸೈಕಲ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಗಾಯ

Madhyama Bimba

ಸಮಾಜ ಹಿತಕ್ಕಿಂತ ಕಾಂಗ್ರೆಸ್ ಓಲೈಕೆಯೇ ಅಣ್ಣಪ್ಪ ನಕ್ರೆ, ರಾಘವ ಕುಕ್ಕುಜೆ ಯವರಿಗೆ ಮುಖ್ಯವಾಯಿತೇ?-ಸಮುದಾಯದಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಆದಾಗ ಸೊಲ್ಲೆತ್ತಲಿಲ್ಲ ಯಾಕೆ?- ಸಮುದಾಯದ ತಾ.ಪಂ ಮಾಜಿ ಅಧ್ಯಕ್ಷ ಸುಂದರ್ ಬಿ. ಮತ್ತು ಸಂಜೀವ ಮಾಳ ತಿರುಗೇಟು

Madhyama Bimba

ಅನಂತಶಯನ ಶಾರದಾ ಮಹಿಳಾ ಮಂಡಳಿ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಫಾಟಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More