ಕಾರ್ಕಳ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳುವಾಯಿಯ ಕಾಂತಾವರ ಕ್ರಾಸ್ ಬಳಿ ಬಸ್ ಹಾಗೂ ಕಾರು ನಡುವೆ ಇಂದು ಅಫಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ತಿಂಗಳಿನಿಂದ ನಡೆಯುತ್ತಿರುವ ಅಫಘಾತಗಳಲ್ಲಿ ಈ ಪ್ರಕರಣವು ಸೇರಿದಂತಾಗಿದೆ.
ಕಾಂತಾವರ ಕ್ರಾಸ್ ನಲ್ಲಿ ಬುಧವಾರದಿಂದ ಬಂದ್ ಮಾಡಲಾದ ನಂತರ ರಸ್ತೆಯ ಅವ್ಯವಸ್ಥಿತ ಚಾಲನೆಯಿಂದಾಗಿ ಅಫಘಾತ ಹೆಚ್ಚಾಗುವ ಮುನ್ಸೂಚನೆ ಕಂಡು ಬಂದಿದೆ. ಕಾಂತಾವರ ಕಡೆಯಿಂದ ಬರುವ ವಾಹನಗಳು ಮೂಡುಬಿದಿರೆ ಕಡೆಗೆ ಸಾಗಬೇಕಾದರೆ ಕಾರ್ಕಳ ಕಡೆ ತಿರುಗಿ ಚಿಲಿಂಬಿ ಬಳಿ ಯು ಟರ್ನ್ ಪಡೆದು ಬೆಳುವಾಯಿ ಬಂದು ಮುಂದೆ ಸಾಗಬೇಕಾಗಿದೆ.
ರಸ್ತೆ ವೇಗದ ಚಾಲನೆಗೆ ಸಿದ್ಧಗೊಂಡ ನಂತರ ಅಫಘಾತಕ್ಕೆ ಮತ್ತೆ ಹೊಸ ಕಾರಣಗಳು ಗೋಚರಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನ ನಿತ್ಯ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುತ್ತಿರುವುದರಿಂದ, ಸಂಚಾರಕ್ಕೆ ಹೊಸ ದಾರಿ ನೀಡುತ್ತಿರುವುದರಿಂದ ವಾಹನ ಸವಾರರು ದಿಕ್ಕು ತೋಚದಂತಾಗಿದ್ದಾರೆ.
